ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?

Date:

ಇವತ್ತು ಆರ್.ಸಿ.ಬಿ ಗೆ ಮಾಡು ಇಲ್ಲವೇ ಮಡಿ ಪಂದ್ಯ. ಮಾಡಿದರೆ ಕಪ್ ಗೆಲ್ಲುವ ಆಸೆ ಜೀವಂತವಾಗಿರುತ್ತದೆ. ಮಡಿದರೆ ಖೇಲ್ ಖತಂ. ಆದರೆ ಈಗಾಗಲೇ ಟೀಂನಿಂದ ಔಟಾಗಿರುವ ಪಂಜಾಬ್ ಮೈಚಳಿಬಿಟ್ಟು ಆಡುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಆರ್.ಸಿ.ಬಿ ಯನ್ನು ಡ್ಯಾಮೇಜ್ ಮಾಡಲು ಬೇಕಾದ ರಣತಂತ್ರಗಳಲ್ಲಿ ತೊಡಗಿದೆ. ಕ್ರೀಡಾಪ್ರೇಮಿಗಳು ಹೀಗೆಲ್ಲಾ ಭಾವಿಸುತ್ತಿದ್ದಾರೆ. ಆದರೆ ಬೆಂಗಳೂರು ಫೈನಲ್ ಗೆ ಹೋಗಲೇಬೇಕು ಎಂಬ ಒಳ ಒಪ್ಪಂದ ನಡೆದಿದೆ ಎನ್ನಲಾಗುತ್ತಿದೆ. ಫೈನಲ್ ಪಂದ್ಯ ಬೆಂಗಳೂರಿನಲ್ಲಿರುವುದರಿಂದ, ಜೊತೆಗೆ ಬೆಂಗಳೂರಿನ ಆಟಗಾರರು ಕೊಡುವಷ್ಟು ಮನರಂಜನೆಯನ್ನು ಯಾರೂ ಕೊಡುತ್ತಿಲ್ಲವಾದ್ದರಿಂದ- ಬಿಸಿನೆಸ್ ಲೆಕ್ಕಾಚಾರದಲ್ಲಿರುವ ಆಡಳಿತ ಮಂಡಳಿಯ ಪ್ರಮುಖರು ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಬಲ್ಲಮೂಲಗಳಿಂದ ಮಾಹಿತಿ ಸೋರಿಕೆಯಾಗಿದೆ. ಇವು ಎಷ್ಟು ನಿಜವೋ..? ಸುಳ್ಳೋ..? ಗೊತ್ತಿಲ್ಲ. ಆದರೆ ಆರ್.ಸಿ.ಬಿ ಯಿಂದ ಸಿಕ್ಕಾಪಟ್ಟೆ ಬಿಸಿನೆಸ್ ಆಗುತ್ತೇ ಅನ್ನೋದು ಮಾತ್ರ ದಿಟ. ಕೋಹ್ಲಿ, ಗೇಲ್, ವಿಲಿಯರ್ಸ್, ವ್ಯಾಟ್ಸನ್- ಇವರಲ್ಲಿ ಯಾರಾದರಿಬ್ಬರು ಸ್ಕ್ರೀಸ್ ನಲ್ಲಿ ಕಚ್ಚಿಕೊಂಡರೇ ಸಾಕು, ಗುಡುಗು, ಸಿಡಿಲಿನದ್ದೇ ಆರ್ಭಟ. ಇದು ಗೊತ್ತಿರುವ ಹಕೀಕತ್ತಾಗಿರುವುದರಿಂದ ಮೂರ್ನಾಲ್ಕು ಮ್ಯಾಚ್ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಹಿಂದಿನ ಒಂದೆರಡು ಮ್ಯಾಚ್ ಗಳೂ ಫಿಕ್ಸ್ ಆಗಿವೆ ಎಂದೂ ಹೇಳಲಾಗುತ್ತಿದೆ. ಬಲಿಷ್ಠ ಬೌಲಿಂಗ್ ಪಡೆಯಿದ್ದ ಗುಜರಾತ್ ಲಯನ್ಸ್ ಮೇಲೆ ಆರ್.ಸಿ.ಬಿ 248 ಸಿಡಿಸಿತ್ತು. ಆದರೆ ಆರ್.ಸಿ.ಬಿಯ ದುರ್ಬಲ ಬೌಲಿಂಗ್ ವಿರುದ್ಧ ಗುಜರಾತ್ ಸಿಂಹಗಳು 140ಕ್ಕೆ ಕುಸಿದಿದ್ದರು. ಇದು ಹಲವರ ಸಂಶಯಕ್ಕೆ ಕಾರಣವಾಗಿದೆ.

  • ರಾ ಚಿಂತನ್

POPULAR  STORIES :

ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!

ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…

ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

 

Share post:

Subscribe

spot_imgspot_img

Popular

More like this
Related

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...