ಭೂಗತ ಪಾತಕಿ ದಾವೂದ್ ಸಹಚರರ ಹೆಸರಲ್ಲಿ, ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡೋದಾಗಿ ಬಂದಿದ್ದ ಇ-ಮೇಲ್ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ತನಿಖೆಗಿಳಿದ ಈಶಾನ್ಯ ವಿಭಾಗದ ಪೊಲೀಸರು ಮೇಲ್ ಮಾಡಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಮೇಲ್ ಮಾಡಿ, 10 ಮಿಲಿಯನ್ ಡಾಲರ್ಗೆ ಬೇಡಿಕೆಯಿಟ್ಟಿದ್ದರು. ಮಾರ್ಚ್ 22, ಮೇ 6 ರಂದು ಎರಡು ಬಾರಿ ಇ-ಮೇಲ್ ಮಾಡಿದ್ದ ಆರೋಪಿಗಳು ದಾವೂದ್ ಸಹಚರರ ಬಿಡುಗಡೆಗೂ ಬೇಡಿಕೆಯಿಟ್ಟಿದ್ದರು. ಒಂದು ತಿಂಗಳಿನಿಂದ ಕಾರ್ಯಚರಣೆಗೆ ಇಳಿದಿದ್ದ ಪೊಲೀಸರು ಕೊನೆಗೂ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ರಾಘವೇಂದ್ರ, ಹೊಯ್ಸಳ ಎಂಬಿಬ್ಬರು ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇವರು ಈಸ್ಟ್-ವೆಸ್ಟ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿಗಳಾಗಿದ್ದು, ಉಪನ್ಯಾಸಕರ ಹೆಸರಿನಲ್ಲಿ ಇ-ಮೇಲ್ ಮಾಡುತ್ತಿದ್ದರಂತೆ. ಉಪನ್ಯಾಸಕರು ನೀಡುತ್ತಿದ್ದ ಟಾರ್ಚರ್ನಿಂದ ಅವರನ್ನು ಸಿಕ್ಕಿಸೋದಕ್ಕೆ ಹೋಗಿ ಈಗ ಕೋಳತೊಡಿಸಿಕೊಂಡಿದ್ದಾರೆ.
- ರಘು ಆರ್ ಇಂಜನಹಳ್ಳಿ
POPULAR STORIES :
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್ನಲ್ಲಿ ನಿಂತಿದ್ದಳು..!? ಆಟೋಡ್ರೈವರ್ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?