ಟೀಂ ಇಂಡಿಯಾದ ಈಗಿನ ಸೆಹ್ವಾಗ್ ಇವರೇ!

Date:

ಭಾರತ ತಂಡದ ನಾಯಕ ಶಿಖರ್‌ ಧವನ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಲಿರುವ ಪೃಥ್ವಿ ಶಾ ಎದುರಾಳಿ ತಂಡದ ಬೌಲರ್‌ಗಳಿಗೆ ಬೆವರಿಳಿಸಲಿದ್ದಾರೆಂದು ಶ್ರೀಲಂಕಾ ಸ್ಪಿನ್‌ ದಂತಕತೆ ಮುತ್ತಯ್ಯ ಮುರಳಿಧರನ್‌ ಶ್ರೀಲಂಕಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ತಂಡಗಳು ಭಾನುವಾರ ಮೊದಲನೇ ಓಡಿಐ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಅಂದಹಾಗೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ಮುಖ್ಯ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕಾರಣ ಶಿಖರ್ ಧವನ್‌ ನಾಯಕತ್ವದ ಭಾರತ ಎರಡನೇ ತಂಡವನ್ನು ಶ್ರೀಲಂಕಕ್ಕೆ ಕಳುಹಿಸಲಾಗಿದೆ. ಈ ಪ್ರವಾಸದಲ್ಲಿ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಶ್ರೀಲಂಕಾ ಪ್ರವಾಸದ ಟೀಮ್‌ ಇಂಡಿಯಾದಲ್ಲಿ ಬಹುತೇಕ ಯುವ ಆಟಗಾರರೇ ಇರುವ ಹಿನ್ನೆಲೆಯಲ್ಲಿ ಅವಕಾಶಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಲಿದ್ದಾರೆಂಬುದು ಕುತೂಹಲದ ವಿಚಾರ. ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಇನಿಂಗ್ಸ್ ಆರಂಭಿಸುವ ಹಿನ್ನೆಲೆಯಲ್ಲಿ ಕನ್ನಡಿಗ ದೇವದತ್‌ ಪಡಿಕ್ಕಲ್‌ ಬೆಂಚ್‌ ಕಾಯಬೇಕಾಗುತ್ತದೆ.


ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಅವರ ಬಗ್ಗೆ ಮಾತನಾಡಿದ ಮುರಳಿಧರನ್‌, ಈ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸರಣಿಯಲ್ಲಿ ಈ ಜೋಡಿ ಸಕ್ಸಸ್‌ ಆಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
“ಪೃಥ್ವಿ ಶಾ ಆಡುವ ಬ್ಯಾಟಿಂಗ್‌ ಶೈಲಿಯು ಟೆಸ್ಟ್‌ಗಿಂತ ಓಡಿಐ ಹಾಗೂ ಟಿ20 ಸ್ವರೂಪಕ್ಕೆ ಚೆನ್ನಾಗಿ ಹೊಂದಾಣಿಯಾಗುತ್ತದೆ. ಪೃಥ್ವಿ ಶಾ ಬ್ಯಾಟಿಂಗ್‌ ವಿಶೇಷವಾಗಿ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಅವರನ್ನು ನೆನಪಿಸುತ್ತದೆ. ಬೌಲಿಂಗ್‌ ತಂಡವನ್ನು ಒತ್ತಡಕ್ಕೆ ತಳ್ಳಲು ಇವರು(ಪೃಥ್ವಿ ಶಾ) ಸಾಕಷ್ಟು ಅಪಾಯವನ್ನು ತನ್ನ ಮೇಲೆ ಎಳೆದುಕೊಳ್ಳುತ್ತಾರೆ. ಇವರು ರನ್‌ ಗಳಿಸಿದ್ದೇ ಆದಲ್ಲಿ ಭಾರತ ತಂಡ ಗೆಲ್ಲುವ ಸಾಧ್ಯತೆ ಇರುತ್ತದೆ. ಏಕೆಂದರೆ ಅವರು ಅತ್ಯಂತ ಕಡಿಮೆ ಅವಧಿಯಲ್ಲಿಯೇ ದೊಡ್ಡ ಮೊತ್ತವನ್ನು ಕಲೆ ಹಾಕುತ್ತಾರೆ,” ಎಂದು ಮುರಳಿಧರನ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.


ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ಪೃಥ್ವಿ ಶಾ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಚೊಚ್ಚಲ ಸರಣಿಯಲ್ಲಿ ಅವರು 84 ರನ್‌ ಗಳಿಸಿದ್ದರು. ಇದರಲ್ಲಿ 40 ರನ್‌ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಶಿಖರ್‌ ಧವನ್‌ ಆರಂಭಿಕನಾಗಿ ಸಾಕಷ್ಟು ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಅವರು ಈ ಸರಣಿಯಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಬಹುದಾಗಿದೆ.
ಪೃಥ್ವಿ ಶಾ ಅವರು ತಮ್ಮ ಸ್ವಾಭಾವಿಕ ಬ್ಯಾಟಿಂಗ್‌ ಮಾಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಅವರಿಗೆ ಬೆಂಬಲ ನೀಡಬೇಕೆಂದು ಸ್ಪಿನ್‌ ದಿಗ್ಗಜ ಸಲಹೆ ನೀಡಿದ್ದಾರೆ.
“ಪೃಥ್ವಿ ಶಾ ಇಷ್ಟಬಂದಂತೆ ಆಡಲು ಭಾರತ ತಂಡ ಅವಕಾಶ ನೀಡುವ ಅಗತ್ಯವಿದೆ. ಅಲ್ಲದೆ ಪಂದ್ಯಗಳನ್ನು ಗೆಲ್ಲಬೇಕೆಂದರೆ, ಆಟಗಾರರಿಗೆ ಸ್ವತಂತ್ರವಾಗಿ ಆಡಲು ಬಿಡಬೇಕಾಗುತ್ತದೆ. ಅವರು ನಿಜಕ್ಕೂ ಅಪಾಯಕಾರಿ ಆಟಗಾರ. ಆದರೆ, ಶಿಖರ್‌ ಧವನ್‌ ಎಂದಿನಂತೆ ಸ್ವಾಭಾವಿಕ ಆಟವನ್ನು ಮುಂದುವರಿಸಲಿ. ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ನಾನು ಆತನನ್ನು ಹತ್ತಿರದಿಂದ ನೋಡಿದ್ದೇನೆ. ಧವನ್‌ ಸಾಮಾನ್ಯವಾಗಿ ಆಡಿದರೆ, ಪೃಥ್ವಿ ಶಾ ಎದುರಾಳಿ ಬೌಲರ್‌ಗಳನ್ನು ಡ್ಯಾಮೇಜ್‌ ಮಾಡಲು ಮುಂದಾಗಬೇಕು,” ಎಂದು ಮುರಳಿಧರನ್‌ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...