No menu items!
11.1 C
Munich
Wednesday, April 29, 2026

ಪ್ರೀತಿ, ಅದು, ಸಾಲ ಮತ್ತು ಆತ್ಮಹತ್ಯೆ!!

Must read

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರೀತಿಗಾಗಿ ಜಮೀನು ಮಾರಿ, ಸಾಲಮಾಡಿ ಕೊಂಡಿದ್ದ. ಇದೀಗ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದ ಯುವಕ ನಂಜುಂಡಸ್ವಾಮಿ (30) ಮೃತ ದುರ್ದೈವಿ. ವಿವಾಹವಾಗಿದ್ದ ಮಹಿಳೆಯನ್ನು ಪ್ರೀತಿ ಮಾಡಿದ್ದ ಯುವಕ ಈಗ ಆಕೆಯ ಜೊತೆಗಿನ ಫೋಟೋ, ವಾಟ್ಸಪ್ ಚಾಟ್‌ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಾವಿಗೆ ಶರಣಾಗಿದ್ದಾನೆ. ಹಿರಿಯೂರುತಾಲೂಕಿನ ಪಟ್ರೆಹಳ್ಳಿ ‌(ಲಕ್ಷ್ಮೀಪುರ) ಗ್ರಾಮದ ತೇಜು ತೇಮಿಳು ಎಂಬ ಗೃಹಿಣಿಯನ್ನು ನಂಜುಂಡಸ್ವಾಮಿ ಪ್ರೀತಿ ಮಾಡುತ್ತಿದ್ದ. ಎರಡು ಮದುವೆಯಾಗಿದ್ದರೂ ಮಹಿಳೆ ನಂಜುಂಡಸ್ವಾಮಿಯನ್ನು ಪ್ರೀತಿಸುತ್ತಿದ್ದಳು.

 

ಮೂರು ವರ್ಷಗಳ ಹಿಂದೆ ಯಾರಿಗೂ ತಿಳಿಯದಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಇವರಿಬ್ಬರೂ ಮದುವೆ ಆಗಿದ್ದರು. ಇವರಿಬ್ಬರು ಮಾಡಿರುವ ವಾಟ್ಸಪ್ ಚಾಟ್ ಸಾಮಾಜಿಕ ತಾಲತಾಣದಲ್ಲಿ ಅಪ್ ಲೋಡ್ ಆಗಿದೆ. ಮದುವೆ ಬಳಿಕವೂ ತೇಜು ಮತ್ತೊಬ್ಬನ ಸ್ನೇಹ ಮಾಡಿದ್ದಳು ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮೋಸಹೊದ ನಂಜುಂಡಸ್ವಾಮಿ ನನ್ನ ಸಾವಿಗೆ ಇವಳೇ ಕಾರಣ. ಜೊತೆಗೆ ನನ್ನ ಸಾಲಗಾರನನ್ನಾಗಿ ಮಾಡಿದ್ದಾಳೆ ಎಂದು ಆರೋಪಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರನಕಟ್ಟೆ ಬಾಲು ಅಣ್ಣ (ಗಂಡ) ಇವಳನ್ನು ಸುಮ್ನೆ ಬಿಡಬೇಡಿ ಇಂತಿ ತೇಜು ಲೇಟ್ ನಂಜುಂಡಸ್ವಾಮಿ ಎಂದು ತನ್ನ ವಾಟ್ಸಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಬರೆದು, ಫೋಟೋ ಅಪ್ಲೋಡ್ ಮಾಡಿ ನಂಜುಂಡಸ್ವಾಮಿ ನೇಣಿಗೆ ಕೊರೊಳೊಡ್ಡಿದ್ದಾನೆ.

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರಾಣ ಕಳೆದುಕೊಳ್ಳುವ ಮೂಲಕ ಪ್ರೇಮಿಯ ಬದುಕು ದುರಂತ ಅಂತ್ಯ ಕಂಡಿದೆ. ವಿಷಯ ತಿಳಿದ ತಕ್ಷಣ ಹಿರಿಯೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article