ಪ್ರೀತಿ, ಅದು, ಸಾಲ ಮತ್ತು ಆತ್ಮಹತ್ಯೆ!!

Date:

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರೀತಿಗಾಗಿ ಜಮೀನು ಮಾರಿ, ಸಾಲಮಾಡಿ ಕೊಂಡಿದ್ದ. ಇದೀಗ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದ ಯುವಕ ನಂಜುಂಡಸ್ವಾಮಿ (30) ಮೃತ ದುರ್ದೈವಿ. ವಿವಾಹವಾಗಿದ್ದ ಮಹಿಳೆಯನ್ನು ಪ್ರೀತಿ ಮಾಡಿದ್ದ ಯುವಕ ಈಗ ಆಕೆಯ ಜೊತೆಗಿನ ಫೋಟೋ, ವಾಟ್ಸಪ್ ಚಾಟ್‌ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಾವಿಗೆ ಶರಣಾಗಿದ್ದಾನೆ. ಹಿರಿಯೂರುತಾಲೂಕಿನ ಪಟ್ರೆಹಳ್ಳಿ ‌(ಲಕ್ಷ್ಮೀಪುರ) ಗ್ರಾಮದ ತೇಜು ತೇಮಿಳು ಎಂಬ ಗೃಹಿಣಿಯನ್ನು ನಂಜುಂಡಸ್ವಾಮಿ ಪ್ರೀತಿ ಮಾಡುತ್ತಿದ್ದ. ಎರಡು ಮದುವೆಯಾಗಿದ್ದರೂ ಮಹಿಳೆ ನಂಜುಂಡಸ್ವಾಮಿಯನ್ನು ಪ್ರೀತಿಸುತ್ತಿದ್ದಳು.

 

ಮೂರು ವರ್ಷಗಳ ಹಿಂದೆ ಯಾರಿಗೂ ತಿಳಿಯದಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಇವರಿಬ್ಬರೂ ಮದುವೆ ಆಗಿದ್ದರು. ಇವರಿಬ್ಬರು ಮಾಡಿರುವ ವಾಟ್ಸಪ್ ಚಾಟ್ ಸಾಮಾಜಿಕ ತಾಲತಾಣದಲ್ಲಿ ಅಪ್ ಲೋಡ್ ಆಗಿದೆ. ಮದುವೆ ಬಳಿಕವೂ ತೇಜು ಮತ್ತೊಬ್ಬನ ಸ್ನೇಹ ಮಾಡಿದ್ದಳು ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮೋಸಹೊದ ನಂಜುಂಡಸ್ವಾಮಿ ನನ್ನ ಸಾವಿಗೆ ಇವಳೇ ಕಾರಣ. ಜೊತೆಗೆ ನನ್ನ ಸಾಲಗಾರನನ್ನಾಗಿ ಮಾಡಿದ್ದಾಳೆ ಎಂದು ಆರೋಪಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರನಕಟ್ಟೆ ಬಾಲು ಅಣ್ಣ (ಗಂಡ) ಇವಳನ್ನು ಸುಮ್ನೆ ಬಿಡಬೇಡಿ ಇಂತಿ ತೇಜು ಲೇಟ್ ನಂಜುಂಡಸ್ವಾಮಿ ಎಂದು ತನ್ನ ವಾಟ್ಸಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಬರೆದು, ಫೋಟೋ ಅಪ್ಲೋಡ್ ಮಾಡಿ ನಂಜುಂಡಸ್ವಾಮಿ ನೇಣಿಗೆ ಕೊರೊಳೊಡ್ಡಿದ್ದಾನೆ.

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರಾಣ ಕಳೆದುಕೊಳ್ಳುವ ಮೂಲಕ ಪ್ರೇಮಿಯ ಬದುಕು ದುರಂತ ಅಂತ್ಯ ಕಂಡಿದೆ. ವಿಷಯ ತಿಳಿದ ತಕ್ಷಣ ಹಿರಿಯೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...