ಬಿಜೆಪಿಗೆ ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ ಒಡೆಯುವ, ಕೆಡವುವ ಸಂಸ್ಕೃತಿ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, BharatJodoYatra ಯ ಯಶಸ್ಸನ್ನು ಸಹಿಸದ ಬಿಜೆಪಿ ಹತಾಶ ಸ್ಥಿತಿಗೆ ತಲುಪಿ ತನ್ನೊಳಗಿನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಬ್ಯಾನರ್ಗಳ ಮೇಲೆ ತೋರಿಸುತ್ತಿದೆ. ಕೈಲಾಗದವರು ಮೈ ಪರಚಿಕೊಳ್ಳುವುದು ಎಂದರೆ ಇದೇ ಅಲ್ಲವೇ ಬಿಜೆಪಿ ಎಂದು ಪ್ರಶ್ನಿಸಿದೆ. ಇನ್ನೂ 40% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂಬ ಪಾಲಾಯನವಾದಿ ಮಾತುಗಳನ್ನಾಡುವ PayCM ಬಸವರಾಜ ಬೊಮ್ಮಾಯಿ ಅವರೇ, ಕಳೆದ ಜನವರಿಯಲ್ಲೇ ಲೋಕಾಯುಕ್ತ ವರದಿ ನೀಡಿದ್ದನ್ನು ಮರೆಮಾಚುತ್ತಿರುವುದೇಕೆ? #40percentsarkara ದ ಕಮಿಷನ್ ಕರ್ಮದ ಬಗೆಗಿನ ಆ ವರದಿ ಏನಾಯ್ತು? ಲೋಕಾಯುಕ್ತ ನೀಡಿದ ಆ ವರದಿಯನ್ನು ಬಹಿರಂಗಗೊಳಿಸಲು ಭಯವೇಕೆ? ಅದು ನಿಮಗೆ ದಾಖಲೆಯಲ್ಲವೇ? ಎಂದು ಕಾಂಗ್ರೆಸ್ ಹೇಳಿದೆ