ಲವ್ ಜಿಹಾದ್ ಗೆ ನಟಿ ಬಾಳು ಹಾಳಾಯ್ತಾ ?

Date:

ಕನ್ನಡದ ‘ಆಕಾಶ ದೀಪ’ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್​ ಈಗ ಲವ್ ಜಿಹಾದ್ ಗೆ ಒಳಗಾಗಿದ್ದಾರೆ ಅನ್ನೊ ಮಾತು ಕೇಳಿ ಬಂದಿದೆ . ಅವಕಾಶಗಳನ್ನು ಅರಸಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾದ ನಟ ಅಮ್ಜದ್​ ಅಲಿಯಾಸ್​ ಅರ್ನವ್​ ಎಂಬಾತನನ್ನ ಪ್ರೀತಿಸಿ ಮದುವೆ ಕೂಡ ಆಗಿದ್ದರು . ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ .

‘ನನಗೂ ಅರ್ನವ್​ಗೂ ಮದುವೆ ಆಗಿದೆ. ಆರ್ನವ್ ನನಗೆ ಸಾಕಷ್ಟು ಹಿಂಸೆ ಕೊಡ್ತಿದ್ದಾನೆ. ಮದುವೆ ವಿಚಾರವನ್ನು ಗುಟ್ಟಾಗಿ ಇಡುವಂತೆ ಹೇಳ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ’ ಎಂದಿರುವ ದಿವ್ಯಾ, ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್​ನಲ್ಲಿ ಆಯಕ್ಟಿಂಗ್​ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್​ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ. ಕರೊನಾ ಲಾಕ್​ಡೌನ್​ ವೇಳೆ ಅವನು 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...