ಮದ್ದೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಜೂಜು-ಹೆಣ್ಣಿನ ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಹನೂರು ತಾಲೂಕಿನ ವಡ್ಡರಪಾಳ್ಯದ ರಾಜೇಶ್ @ ಕುಳ್ಳ
ಬಂಧಿತ ಆರೋಪಿಯಾಗಿದ್ದು, KSRTC ಬಸ್ ನಿಲ್ದಾಣದ ಬಳಿ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಖತರ್ನಾಕ್ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕ, ತಮಿಳುನಾಡಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ರಾಜೇಶ್
ರೈತರಿಗೆ ಬೈಕ್ಗಳನ್ನ ಮಾರಾಟ ಮಾಡುತ್ತಿದ್ದ.
ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರ ಬಳಿ ಸಿಕ್ಕಿಬಿದ್ದ ರಾಜೇಶ್ ಡಾಕ್ಯುಮೆಂಟ್ ತೋರಿಸದೆ ಅನುಮಾನಾಸ್ಪದವಾಗಿ ವರ್ತಿಸಿದ್ದ. ಈ ವೇಳೆ ರಾಜೇಶ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ತನ್ನ ಕಳ್ಳತನದ ಹಿಸ್ಟರಿ ತಿಳಿಸಿದ್ದಾನೆ. ಇನ್ನ ಬಂಧಿತನಿಂದ 16.40 ಲಕ್ಷ ಮೌಲ್ಯದ ಬರೋಬ್ಬರಿ 34 ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದ್ದು, ಮದ್ದೂರು ಪೊಲೀಸರ ಕಾರ್ಯಕ್ಕೆ SP ಯತೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ .