ಸಮಯ ಪ್ರಜ್ಞೆ ಮೆರೆದ ಪೊಲೀಸ್: ಪುನರ್ಜೀವ ಪಡೆದ ಬಾಲಕಿ..!

admin
By admin
1 Min Read

ಮುಂಬೈ ಕಿನಾಡಾ ಎಕ್ಸ್ ಪ್ರೆಸ್ ರೈಲು ತೆರಳುವ ವೇಳೆ ಫ್ಲಾಟ್ ಫಾರ್ಮ್‍ನಿಂದ ಕಾಲುಜಾರಿ ಬಿದ್ದ ಯುವತಿಯೊಬ್ಬಳು ರೈಲಿನ ಅಡಿಗೆ ಸಿಲುಕಿಕೊಂಡ ಭೀಕರ ಘಟನೆ ಲೋನಾವಾಲಾ ರೈಲು ನಿಲ್ದಾಣದಲ್ಲಿ ನಡೆದಿದ್ದು, ಪೊಲೀಸ್ ಕಾನ್ಸ್ ಟೇಬಲ್ ಪವನ್ ತಯಾದೆ ಅವರ ಸಮಯ ಪ್ರಜ್ಞೆಯಿಂದ ಬಾಲಕಿ ಜವರಾಯನನ್ನು ಗೆದ್ದು ಬಂದಿದ್ದಾಳೆ.
ಬೆಳಿಗ್ಗೆ 9ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಾಲಕಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ ಈ ವೇಳೆ ತನ್ನ ಎರಡೂ ಕಾಲುಗಳು ರೈಲ್ವೇ ಫ್ಲಾಟ್‍ಫಾರ್ಮ್ ಒಳಗೆ ಹೋಗಿದ್ದು ಜೀವ ಭಯದಿಂದ ಮೇಲೇಳಲು ಯತ್ನಿಸುತ್ತಿದ್ದ ಬಾಲಕಿಯನ್ನು ಕಂಡ ಪೇದೆ ಪವನ್ ಅವರು ಕೂಡಲೇ ಆಕೆಯನ್ನು ಎಳೆದು ರಕ್ಷಿಸಿದ್ದಾಳೆ. ಈ ಒಂದು ಅಚಾತುರ್ಯ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಪೊಲೀಸ್ ಕಾನ್ಸ್ ಟೇಬಲ್ ನ ಸಮಯ ಪ್ರಜ್ಞೆಯಿಂದ ಒಂದು ಪುಟ್ಟ ಜೀವ ಉಳಿದಿದ್ದು ಪವನ್ ಅವರಿಗೆ ದೇಶದೆಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಇನ್ನು ಟ್ವಿಟರ್ ಮೂಲಕ ಘಟನೆಯ ಕುರಿತು ಮಾತನಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾನ್ಸ್‍ಟೇಬಲ್ ಪವನ್ ಅವರಿಗೆ ನನ್ನ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

https://www.youtube.com/watch?v=PHPX1dEbvLQ

Like us on Facebook  The New India Times

POPULAR  STORIES :

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

Share This Article