ಪ್ರತೀಕಾರ ತೀರಿಸಿಕೊಂಡ ಭಾರತೀಯ ಯೋಧರು: ಪಾಕ್‍ನ 40 ಸೈನಿಕರ ಹತ್ಯೆ.!!

Date:

ಕಳೆದೊಂದು ವಾರಗಳ ಹಿಂದೆಯಷ್ಟೇ ಭಾರತೀಯ ಯೋಧ ಹುತಾತ್ಮ ಮನ್‍ದೀಪ್ ಸಿಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ 4 ಪಾಕ್ ಸೇನಾ ನೆಲೆ ಸೇರಿದಂತೆ 40ಕ್ಕೂ ಅಧಿಕ ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್ 28ರಂದು ಯೋಧ ಮನ್‍ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದಲ್ಲದೇ ಅವರ ದೇಹವನ್ನು ಗುರುತಿಗೂ ಸಿಗದ ಹಾಗೆ ತುಂಡು ತುಂಡು ಮಾಡಿದ್ದರು. ಇದಾದ 24 ಗಂಟೆಯೊಳಗೆ ಭಾರತೀಯ ಸೈನಿಕರು ಪಾಕ್ ಮೇಲೆ ಧಾಳಿ ನಡೆಸಿ 4 ಸೇನಾ ನೆಲೆಯನ್ನು ಧ್ವಂಸ ಮಾಡುವ ಮೂಲಕ ತಕ್ಕ ಶಾಸ್ತಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವಾರ ಪಾಕ್ ಸೈನಿಕರ ಸಹಕಾರದಿಂದ ಗಡಿಯೊಳಗೆ ನುಸುಳಿದ್ದ ಪಾಕ್ ಉಗ್ರರು ಭಾರತೀಯ ಯೋಧ ಮನ್‍ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿ ಅವರ ದೇಹವನ್ನು ತಂಡರಿಸಿ ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಇದರ ಪ್ರತಿಕಾರವಾಗಿ ಯೋಧರು ಒಟ್ಟು 40ಕ್ಕೂ ಹೆಚ್ಚು ಪಾಕ್ ಸೈನಿಕರನ್ನು ಹೊಡೆದುರುಳಿಸಿದ್ದಾರೆ.

Like us on Facebook  The New India Times

POPULAR  STORIES :

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಟೆಕ್ಕಿ ಕುಟುಂಬ

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಟೆಕ್ಕಿ ಕುಟುಂಬ ಹಾವೇರಿ: ಇರಾನ್...

ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಮೊಬೈಲ್ ನೋಡುತ್ತಾ ಊಟ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ ಇಂದಿನ ಜೀವನಶೈಲಿಯಲ್ಲಿ...

Ali Khamenei ನಿಧನ: ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಣೆ

Ali Khamenei ನಿಧನ: ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಣೆ ತೆಹ್ರಾನ್: ಇರಾನ್‌ನ...

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್

ರಣಜಿ ಟ್ರೋಫಿ ಫೈನಲ್: ಕರ್ನಾಟಕಕ್ಕೆ ತವರಿನಲ್ಲಿ ಸೋಲು, ಜಮ್ಮು-ಕಾಶ್ಮೀರ ಚೊಚ್ಚಲ ಚಾಂಪಿಯನ್ ಧಾರವಾಡ:...