ಕಳೆದೊಂದು ವಾರಗಳ ಹಿಂದೆಯಷ್ಟೇ ಭಾರತೀಯ ಯೋಧ ಹುತಾತ್ಮ ಮನ್ದೀಪ್ ಸಿಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ 4 ಪಾಕ್ ಸೇನಾ ನೆಲೆ ಸೇರಿದಂತೆ 40ಕ್ಕೂ ಅಧಿಕ ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್ 28ರಂದು ಯೋಧ ಮನ್ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದಲ್ಲದೇ ಅವರ ದೇಹವನ್ನು ಗುರುತಿಗೂ ಸಿಗದ ಹಾಗೆ ತುಂಡು ತುಂಡು ಮಾಡಿದ್ದರು. ಇದಾದ 24 ಗಂಟೆಯೊಳಗೆ ಭಾರತೀಯ ಸೈನಿಕರು ಪಾಕ್ ಮೇಲೆ ಧಾಳಿ ನಡೆಸಿ 4 ಸೇನಾ ನೆಲೆಯನ್ನು ಧ್ವಂಸ ಮಾಡುವ ಮೂಲಕ ತಕ್ಕ ಶಾಸ್ತಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವಾರ ಪಾಕ್ ಸೈನಿಕರ ಸಹಕಾರದಿಂದ ಗಡಿಯೊಳಗೆ ನುಸುಳಿದ್ದ ಪಾಕ್ ಉಗ್ರರು ಭಾರತೀಯ ಯೋಧ ಮನ್ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಿ ಅವರ ದೇಹವನ್ನು ತಂಡರಿಸಿ ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಇದರ ಪ್ರತಿಕಾರವಾಗಿ ಯೋಧರು ಒಟ್ಟು 40ಕ್ಕೂ ಹೆಚ್ಚು ಪಾಕ್ ಸೈನಿಕರನ್ನು ಹೊಡೆದುರುಳಿಸಿದ್ದಾರೆ.
Like us on Facebook The New India Times
POPULAR STORIES :
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!