No menu items!
18.2 C
Munich
Sunday, May 10, 2026

ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ

Must read

ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ ಆಗುತ್ತಿದೆ ಎಂದು ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ಬಳಿಕ ಕರ್ನಾಟಕಕ್ಕೆ ಆಗಮಿಸಿದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದ ಬಳಿ ಅಭಿನಂದಿಸುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಶಾಲು ಹಾಕಿ, ಮೈಸೂರು ಪೇಟ ತೊಡಿಸಿ ಮೋದಿಜೀ ಅವರ ಪುತ್ಥಳಿ ನೀಡಿ ಗೌರವಿಸಲಾಯಿತು.
ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿಯವರು, ನಾನು ಕರ್ನಾಟಕಕ್ಕೆ ಬಹಳ ಸಲ ಬಂದಿದ್ದೇನೆ. ವಿಮಾನನಿಲ್ದಾಣದಲ್ಲಿ ಆಯೋಜಿಸಿದ ದೊಡ್ಡ ಕಾರ್ಯಕ್ರಮವಿದು ಎಂದು ಮೆಚ್ಚುಗೆ ಸೂಚಿಸಿದರು. ಇಲ್ಲಿ ಕೇಸರಿಯಷ್ಟೇ ಕಾಣುತ್ತಿದೆ. ಬಿಜೆಪಿ ಕಾರ್ಯಕರ್ತರಷ್ಟೇ ಇಷ್ಟು ಬೇಗ ಇಂಥ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರಲು ಸಾಧ್ಯ ಎಂದರು. ಬಂಗಾಲದ ಬಿಜೆಪಿ ಗೆಲುವು ಕಾರ್ಯಕರ್ತರ ಶ್ರಮದ ಪರಿಣಾಮ ಎಂದು ವಿಶ್ಲೇಷಿಸಿದರು.
1857ರಲ್ಲಿ ಇದೇ ದಿನ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಸಮರ ನಡೆದಿತ್ತು. ಬಳಿಕ ಶೌರ್ಯ ಮತ್ತು ಸಾಮಥ್ರ್ಯದಿಂದ ದೇಶದ ಗುಲಾಮಿತನವನ್ನು ದೂರ ಮಾಡಲಾಯಿತು. ಆಪರೇಷನ್ ಸಿಂಧೂರದ ವರ್ಷವನ್ನು ನೆನಪಿಸಿಕೊಳ್ಳಲಾಗಿದೆ. ಗುಜತಾತ್‍ನ ಸೋಮನಾಥ ಮಂದಿರದ ಪುನರ್ ನಿರ್ಮಾಣದ ಉತ್ಸವ ನಡೆಯಲಿದೆ. ಅಲ್ಲಿಗೆ ತೆರಳುವುದಾಗಿ ಹೇಳಿದರು.
ಮಾತೆ ಅಣ್ಣಮ್ಮನಿಗೆ ಪ್ರಣಾಮಗಳು. ಕೆಂಪೇಗೌಡರಿಗೆ ನಮನಗಳು ಎಂದು ತಿಳಿಸಿದ ಅವರು, ಬಂಗಾಲದಲ್ಲಿ ಮೊದಲ ಬಾರಿ ಬಿಜೆಪಿಗೆ ಇಷ್ಟು ದೊಡ್ಡ ಆಶೀರ್ವಾದ ಲಭಿಸಿದೆ. ಗುಜರಾತ್‍ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ದಾಖಲೆ ಗೆಲುವು ಲಭಿಸಿದೆ ಎಂದು ವಿವರಿಸಿದರು. ಇದು ಹೊಸ ಇತಿಹಾಸ ಬರೆಯುವ ಘಟನೆಗಳು ಎಂದು ವಿಶ್ಲೇಷಿಸಿದರು.
ಭಾರತದ ಜನರು ಸ್ಥಿರತೆಯ ಮಂತ್ರ ಜಪಿಸುತ್ತಿದ್ದಾರೆ. ಹಗರಣಗಳು ಬೇಡ; ಸಮಸ್ಯೆಗಳಿಗೆ ಪರಿಹಾರ ಬೇಕು. ರಾಷ್ಟ್ರವಾದದ ರಾಜನೀತಿಯನ್ನು ಜನತೆ ಬಯಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರನೀತಿಯೊಂದಿಗೆ ಜನತೆ ನಡೆಯುತ್ತಿದ್ದಾರೆ. ಕರ್ನಾಟಕವು ಬಿಜೆಪಿ ಆಡಳಿತ ಬಯಸುತ್ತಿದೆ ಎಂದು ನುಡಿದರು. ಆಂಧ್ರದಲ್ಲಿ ಎನ್‍ಡಿಎ ಸರಕಾರ ಇದೆ. ಕರ್ನಾಟಕವು ಲೋಕಸಭಾ ಸದಸ್ಯರ ಸ್ಥಾನದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗಮನ ಸೆಳೆದರು.

- Advertisement -spot_img

More articles

- Advertisement -spot_img

Latest article