No menu items!
8 C
Munich
Saturday, May 2, 2026

ಮುಖ್ಯಮಂತ್ರಿಯನ್ನು ಟೀಕಿಸಿದ್ದಕ್ಕೇ ವ್ಯಂಗ್ಯಚಿತ್ರಕಾರ ಅರೆಸ್ಟ್…!

Must read

ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಜಿಲ್ಲಾಡಳಿತವನ್ನು ವ್ಯಂಗ್ಯಚಿತ್ರದ ಮೂಲಕ ಟೀಕಿಸಿದ ವ್ಯಂಗ್ಯಚಿತ್ರಕಾರ ಜಿ. ಬಾಲಕೃಷ್ಣನ್ (ಬಾಲ) ಅವರನ್ನು ಬಂಧಿಸಿಲಾಗಿದೆ.
ಇತ್ತೀಗಷ್ಟೇ ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿ ಎದರು ದಿನಗೂಲಿ ಕಾರ್ಮಿಕರ ಕುಟುಂಬದ ನಾಲ್ವರು (ಐಸಾಕಿಮುತ್ತು ಮತ್ತು ಸುಬ್ಬಲಕ್ಷ್ಮೀ ಹಾಗೂ ಈ ದಂಪತಿಯ ಇಬ್ಬರು ಮಕ್ಕಳು) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲದ ಹಣ ಹಿಂತಿರಿಗಿಸಿದ ಬಳಿಕವೂ ಈ ಕುಟುಂಬದ ಮೇಲೆ ದೌರ್ಜನ್ಯ ನಡೀತಿತ್ತು, ಈ ಬಗ್ಗೆ ಪೊಲೀಸರು ಯಾವ ಕ್ರಮ ಕೈಗೊಳ್ಳಲಿಲ್ಲ. ಆರೇಳು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲು ಅವರು ವ್ಯಂಗ್ಯಚಿತ್ರದ ಮೂಲಕ ಟೀಕಿಸಿದ್ದರು. ಮಗು ಬೆಂಕಿಯಲ್ಲಿ ಬಿದ್ದು ಸುಟ್ಟು ಸತ್ತು ಹೋಗುತ್ತಿದ್ದರೂ ಮುಖ್ಯಮಂತ್ರಿ ಪಳಲಿಸ್ವಾಮಿ, ಪೊಲೀಸ್ ಆಯುಕ್ತರು ಹಾಗೂ ಡಿಸಿ ಸುಮ್ಮನೇ ನಿಂತಿರುವ ಚಿತ್ರ ಇದಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article