ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಬರಹಗಳು
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನು ಬರೀ ನೆನಪು ಮಾತ್ರ. ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಮೂಲ್ಯ. ಲೇಖನಗಳು, ಕಾದಂಬರಿ, ಕಥಾಸಂಕಲನ , ಅನುವಾದ ಹೀಗೆ ಸಾಕಷ್ಟು ಅಕ್ಷರ ಕೃಷಿ ಮಾಡಿದ್ದಾರೆ ರವಿ ಬೆಳಗೆರೆ.
ಕಾದಂಬರಿಗಳು:
ಗೋಲಿಬಾರ್ (1983), ಅರ್ತಿ (1990), ಮಾಂಡೋವಿ (1996), ಮಾಟಗಾತಿ (1998), ಒಮರ್ಟಾ (1999), ಸರ್ಪಸಂಬಂಧ (2000), ಹೇಳಿ ಹೋಗು ಕಾರಣ (2003), ನೀ ಹಿಂಗ ನೋಡಬ್ಯಾಡ ನನ್ನ (2003), ಗಾಡ್ಫಾದರ್ (2005), ಕಾಮರಾಜ ಮಾರ್ಗ (2010), ಹಿಮಾಗ್ನಿ (2012).
ಲೇಖನಿಯಲ್ಲಿ..:
ಕಾರ್ಗಿಲ್ನಲ್ಲಿ ಹದಿನೇಳು ದಿನ (1999), ಬ್ಲ್ಯಾಕ್ ಫ್ರೈಡೆ (2005), ರೇಷ್ಮೆ ರುಮಾಲು (2007), ಇಂದಿರೆಯ ಮಗ ಸಂಜಯ (2002), ಗಾಂಧೀ ಹತ್ಯೆ ಮತ್ತು ಗೋಡ್ಸೆ (2003), ಡಯಾನಾ (2007), ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ.
ಜೀವನ ಕಥನ:
ಪ್ಯಾಸಾ, 1991, ಪಾಪದ ಹೂವು ಫೂಲನ್, ಆಗಸ್ಟ್ 2001, ಸಂಜಯ 2000, ಚಲಂ (ಅನುವಾದ) ಮಾರ್ಚ್ 2008.
ಹತ್ಯಾಕಥನ:
ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991, ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998, ರಂಗವಿಲಾಸ್ ಬಂಗಲೆಯ ಕೊಲೆಗಳು, ಬಾಬಾ ಬೆಡ್ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007, ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012.
ಭೂಗತ ಇತಿಹಾಸ:
ಪಾಪಿಗಳ ಲೋಕದಲ್ಲಿ ಭಾಗ -1 (1995), ಪಾಪಿಗಳ ಲೋಕದಲ್ಲಿ ಭಾಗ 2 (ಸೆಪ್ಟಂಬರ್ 1997), ಭೀಮಾ ತೀರದ ಹಂತಕರು (ಮೇ 2001), ಪಾಪಿಗಳ ಲೋಕದಲ್ಲಿ (2005), ಡಿ ಕಂಪನಿ (2008).
ಬದುಕು:
ಖಾಸ್ಬಾತ್ 96, 1997, ಖಾಸ್ಬಾತ್ 97, ಸೆಪ್ಟಂಬರ್ 1997, ಖಾಸ್ಬಾತ್ 98, ಸೆಪ್ಟಂಬರ್ 1998, ಖಾಸ್ಬಾತ್ 99, ಅಕ್ಟೋಬರ್ 2003, ಖಾಸ್ಬಾತ್ 2000, ಅಕ್ಟೋಬರ್ 2003, ಖಾಸ್ಬಾತ್ 2001, ಜನವರಿ 2007, ಖಾಸ್ಬಾತ್ 2002, ಜನವರಿ 2008, ಖಾಸ್ಬಾತ್ 2003.
ಅಂಕಣ ಬರಹಗಳ ಸಂಗ್ರಹ:
ಜೀವನ ಪಾಠ, ಬಾಟಮ್ ಐಟಮ್ ಭಾಗ 1, ಫೆಬ್ರವರಿ2002, ಬಾಟಮ್ ಐಟಮ್ 2, ಅಕ್ಟೋಬರ್2003, ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006, ಬಾಟಂ ಐಟಮ್ 4 ಹಾಗೂ ಬಾಟಂ ಐಟಮ್ 5.
ಪ್ರೀತಿ ಪತ್ರಗಳು:
ಲವಲವಿಕೆ -1, ಡಿಸೆಂಬರ್ 1998, ಲವಲವಿಕೆ -2, ಸೆಪ್ಟಂಬರ್ 2004, ಲವಲವಿಕೆ -3, ಲವಲವಿಕೆ -4.
ಕವನ ಸಂಕಲನ:
ಅಗ್ನಿಕಾವ್ಯ, 1983, ಇತರೆ. ಹೀಗೆ ತಮ್ಮ ಬರಹದಿಂದಲೇ ಅಂಖ್ಯಾತ ಅಭಿಮಾನಿಗಳು ಹೊಂದಿರುವ ಮಾಂತ್ರಿಕರಾಗಿದ್ದರು.
‘ಅಕ್ಷರ ರಾಕ್ಷಸ’ ಖ್ಯಾತಿಯ ರವಿ ಬೆಳಗೆರೆ ಇನ್ನಿಲ್ಲ
ಬೆಂಗಳೂರು : ಅಕ್ಷರ ರಾಕ್ಷಸ ಖ್ಯಾತಿಯ ರವಿ ಬೆಳಗೆರೆ ಇನ್ನು ನೆನಪು ಮಾತ್ರ. ಅಕ್ಷರ ಕೆಲಸ ಮಾಡುತ್ತಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ ತಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ 12 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಸಿಬ್ಬಂದಿ ಅಪೋಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಿಸದೆ ರಾತ್ರಿ 2.30 ರ ಸುಮಾರಿಗೆ ವಿಧಿವಶರಾದರು ಎಂದು ತಿಳಿದುಬಂದಿದೆ.
ಹಾಯ್ ಬೆಂಗಳೂರು ಎಂಬ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಆ ಕಪ್ಪು ಸುಂದರಿ ಕರ್ನಾಟಕದ ಮೂಲೆಮೂಲೆಗೂ ಚಿರಪರಿಚಿತವಾಗಿತ್ತು. ಓ ಮನಸೇ ಮೂಲಕ ಸಾಕಷ್ಟು ಜನಪ್ರಿಯತೆಗಳಿಸಿದ್ದರು. ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ , ದಾಖಲೆ ರೂಪದಲ್ಲಿ ಮಾರಾಟವಾಗುತ್ತಿದ್ದವು.
ನಗರದ ಕರಿಷ್ಮಾ ಹಿಲ್ನಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ರವಾನೆ ಮಾಡಲಾಗಿದೆ. ಬೆಳಗೆರೆಯವರ ಕನಸಿನ ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿದುಬಂದಿದೆ. ಬೆಳಗೆರೆಯವರ ಮೊದಲ ಪತ್ನಿಗೆ ಇಬ್ಬರು ಪುತ್ರಿಯರು ಹಾಗೂ ಎರಡನೇ ಪತ್ನಿಗೆ ಒಬ್ಬ ಮಗನಿದ್ದಾನೆ.
ಕಾಫಿ ಕುಡಿಯದೇ ಇರೋರು ಇದನ್ನು ಓದಿ..!
ಬಹುತೇಕರು ಕಾಫಿ ಕುಡಿಯುತ್ತಾರೆ. ಕಾಫಿ ಕುಡಿಯುವುದರಿಂದ ರಿಫ್ರೆಶ್ಮೆಂಟ್ ಸಿಗುತ್ತದೆ. ಅದು ನಮ್ಮಲ್ಲಿ ಹೊಸ ಹುರಪನ್ನು ನೀಡುತ್ತದೆ. ಆದರೆ,ಕೆಲವರು ಕಾಫಿಯಿಂದ ದೂರ…ಬಹುದೂರ…ಕಾಫಿ ಕುಡಿಯುವುದೇ ತಪ್ಪು ಎನ್ನುವಂತೆ ವರ್ತನೆ ಮಾಡುವವರೂ ಇದ್ದಾರೆ. ಆದರೆ, ಇದನ್ನು ಓದಿದರೆ ಕಾಫಿ ಕುಡಿಯದೇ ಇರುವವರೂ ಕಾಫಿ ಕುಡಿಯಲು ಆರಂಭಿಸುತ್ತಾರೆ.
ಕೂದಲು ಉದುರುವಿಕೆ ಸಮಸ್ಯೆ ಇರುವವರಂತು ಕಾಫಿ ಮಿಸ್ ಮಾಡಲ್ಲ . ಯಾಕೆಂದರೆ ಕಾಫಿ ಕುಡಿಯುವುದರಿಂದ ಕೂದಲು ಗಟ್ಟಿಯಾಗುತ್ತದೆ.
ಕೂದಲು ಆರೋಗ್ಯವಾಗಿರಲು ಮತ್ತು ಸ್ಟ್ರಾಂಗ್ ಆಗಿರಲು ಸಹಕರಿಸುತ್ತದೆ. ಇದರ ಸೇವನೆಯಿಂದ ಮೆದುಳಿನ ಸ್ಟ್ರೆಸ್ ಫ್ರೀ ಆಗುತ್ತದೆ.
ಕಾಫಿಯಲ್ಲಿನ ಕೆಫೆನ್ ಕೂದಲನ್ನು ಬೆಳೆಸುತ್ತದೆ. ಕೆಫೆನ್ ಶರೀರದಲ್ಲಿ ಕೂದಲನ್ನು ದುರ್ಬಲಗೊಳಿಸುವಂತಹ ಫೋಸ್ಫೋಡಿಸ್ರೇಸ್ ಎಂಜೈಮ್ ಅನ್ನು ಹೆಚ್ಚಿಸುವುದನ್ನು ಅದು ತಡೆಯುತ್ತದೆ.
ಫೋಸ್ಫೋಡಿಸ್ರೇಸ್ ಎಂಜೈಮ್ ಶರೀರದಲ್ಲಿದ್ದರೆ, ಸೈಕ್ಲಿಕ್ ಎಡನೋಸೀಸ್ ಮೋನೋಫಾಸ್ಪೆಕ್ಟ್ ಹೆಚ್ಚುತ್ತದೆ. ಇದರಿಂದ ಕೂದಲು ಬೆಳೆಯುತ್ತದೆ. ಕೆಫೆನ್ನಲ್ಲಿ ಕೂದಲನ್ನು ಹೊಳೆಯುವಂತೆ ಮಾಡುವ ಹಾಗೂ ಸ್ಟ್ರಾಂಗ್ ಆಗಿಸುವ ಗುಣವಿದ್ದು, ಕೂದಲು ಬೆಳೆಯುವಿಕೆಗೆ ಭಾರೀ ಸಹಕಾರಿ ಆಗಿದೆ.
ಸಾಹಸಪ್ರಿಯರು ಹೋಗಲೇ ಬೇಕಾದ ಭಯಾನಕ ರಸ್ತೆಗಳು..!
ಕೆಲವರಿಗೆ ಹುಚ್ಚು ಸಾಹಸಗಳನ್ನು ಮಾಡುವ ಹುಚ್ಚುತನಗಳಿರುತ್ತವೆ. ಅದೇ ಹುಚ್ಚುಗಳಿಗೆ ಅನೇಕರು ಬಲಿಯಾಗಿದ್ದಾರೆ. ಅದರೂ ಸಾಹಸ ಮಾಡುವ ತೆವಲುಗಳು ಮಾತ್ರ ಕಡಿಮೆಯಾಗಿಲ್ಲ. ಈ ಜಗತ್ತಿನಲ್ಲಿ ಅಸಾಮಾನ್ಯ ಸಾಧಕರುಗಳಿದ್ದಾರೆ. ನೀವು ಸಾಹಸಪ್ರಿಯರಾದ್ರೇ ಈ ರಸ್ತೆಗಳಲ್ಲಿ ರೈಡು ಹೊಡೆದು ಬನ್ನಿ ನೋಡೋಣ. ಆದರೆ ಅಲ್ಲಿಗೆ ತಲುಪೋದು ಮಾತ್ರ ಕಾಸ್ಟ್ಲೀ ವಿಚಾರ… ಅದು ನಿಮಗೆ ಬಿಟ್ಟ ವಿಚಾರ.
ನಾರ್ಥ್ ಯುಂಗಾಸ್ ರೋಡ್
69 ಕಿ.ಮಿ.ಗಳಿರುವ, ಬೋಲಿವಿಯಾದ `ಲಾಫಾಝ್’ ನಗರದಿಂದ ಸ್ಟಾರ್ಟ್ ಆಗಿ `ಕೊರೈಕೋ’ ಊರಿಗೆ ಮುಗಿಯುವ ಈ ರಸ್ತೆ ವಿಶ್ವದ ಭಯಾನಕ ರಸ್ತೆಯೆಂದು “ಇಂಟರ್ ಅಮೇರಿಕನ್ ಡೆವೆಲಪ್ಮೆಂಟ್ ಬ್ಯಾಂಕ್” ಹೆಸರಿಟ್ಟಿದೆ. ಅಂಕಿ ಅಂಶದ ಪ್ರಕಾರ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ಮಂದಿ ಇಲ್ಲಿ “ರೋಡ್ಆ್ಯಕ್ಸಿಡೆಂಟ್”ಗೆ ಬಲಿಯಾಗುತ್ತಾರೆ. 20 ವರ್ಷಗಳ ಪುನರ್ನಿರ್ಮಾಣದ ಬಳಿಕ 2006ರಲ್ಲಿ ಪಬ್ಲಿಕ್ಗೆ ಮುಕ್ತವಾದ ಈ ರಸ್ತೆ, ಆ ರಸ್ತೆ ಅಪಘಾತ ತಡೆಯುತ್ತದೆ ಎಂದು ಅಲ್ಲಿಯ ಸರ್ಕಾರ ಹೇಳಿಕೊಂಡರೂ ಜನರಿಗೆ ಅರಿವಾದಂತಿಲ್ಲ. ಹೀಗಾಗಿ ಈ ರಸ್ತೆಯನ್ನು ಹೆಚ್ಚಾಗಿ ಬಳಸುವುದು ವಾಹನ ಸವಾರರಲ್ಲ, ಬದಲಾಗಿ ಸಾಹಸ ಕ್ರೀಡೆಯಲ್ಲಿ ತೊಡಗುವ ಜನರು.
ಗೋಲಿಯಾಂಗ್ ಟನಲ್ ರೋಡ್
ಹೆಸರೇ ಹೇಳುವಂತೆ ಈ ರಸ್ತೆ ಗುಡ್ಡ ಪ್ರದೇಶದಲ್ಲಿದ್ದು ಚೀನಾದ `ತೈವಾಂಗ್ ನಲ್ಲಿದೆ’. ಇದನ್ನು ಅಲ್ಲಿ ವಾಸಿಸುವ ಜನಾಂಗದವರೇ ನಿರ್ಮಿಸಿದ್ದು ವಿಶೇಷ. ಈ ಕಾರ್ಯದಲ್ಲಿ ಅದೆಷ್ಟು ಜನರು ಇಲ್ಲಿಂದ ಬಿದ್ದು ಅವರ ಪ್ರಾಣ ಕಳೆದುಕೊಂಡಿದ್ದಾರೋ ಆ ದೇವರಿಗೇ ಗೊತ್ತು. ಈ ಕಣಿವೆ 5 ಮೀಟರ್ ಉದ್ದ, 4 ಮೀಟರ್ ಅಗಲವಿದ್ದು, ಇಲ್ಲಿ ಪ್ರಯಾಣಿಸಲು ನಿಮಗೆ ಗಟ್ಟಿಯಾದ ಗುಂಡಿಗೆ ಬೇಕು.
ಆಫ್ರಿಕಾ ಇಕ್ಯುಕಿರೋಡ್
ಉತ್ತರ ಪ್ರಾಂತ್ಯದ `ಚಿಲಿ’ಯಲ್ಲಿರುವ ಇದು, `ಆಫ್ರಿಕಾ’ದಿಂದ `ಇಕ್ಯುಕಿ’ಗೆ ಸಂಪರ್ಕಕೊಂಡಿಯಂತಿದೆ. ಈ ರಸ್ತೆ `ಡೇಂಜರಸ್ ಡ್ರೈವ್’ಗಳಿಗೆ ಹೆಸರುವಾಸಿಯಾಗಿದ್ದು, ರಸ್ತೆಯುದ್ದಕ್ಕೂ ಅಪಾಯಕಾರಿ. ಈ ರಸ್ತೆ ಜನರಿಗೆ ಸ್ಪೀಡ್ ಡ್ರೈವ್ ಮಾಡುವುದಕ್ಕೆ ಆಕರ್ಷಿಸುವಂತಿದ್ದು, ಚಾಲಕರು ರಸ್ತೆಯ ಮರ್ಮವನ್ನರಿಯದೇ ಪ್ರಪಾತಕ್ಕೆ ಬೀಳಿಸುತ್ತಾರೆ.
ಸೈಬೀರಿಯನ್ ರೋಡ್
`ಮಾಸ್ಕೋ’ದಿಂದ `ಯಾಕುಸ್ಕ’ ತನಕ ಇರುವ ಈ ರಸ್ತೆ ಸಾಮನ್ಯದಂತಿದ್ದರೂ ಅಲ್ಲಿನ ಹವಾಮಾನ ಕೆಲವೊಮ್ಮೆ ಅಂಟಾರ್ಟಿಕವನ್ನೂ ಮೀರಿಸುವಂತಿದ್ದು, ಆ ಸಮಯದಲ್ಲಿ ಈ ರಸ್ತೆ ಮಂಜು, ಬರ್ಫ್ ಗಳಿಂದ ಮುಚ್ಚಿಹೋಗಿ ರಸ್ತೆ ಜಾರುವಂತೆ ಮಾಡುತ್ತದೆ. ಹೀಗಾಗಿ ಈ ಸಮಯದಲ್ಲಿ ಯಾವ ವಾಹನಗಳು ಓಡಾಡುವಂತಿಲ್ಲ. ಆದ್ದರಿಂದ ದೊಡ್ಡ ಟ್ರೈನ್ ನಂತೆ ಕಾಣುವ ಟ್ರಾಫಿಕ್ ಜಾಮ್ ಇಲ್ಲಿ ನೀವು ನೋಡಬಹುದು. ಕೆಲವೊಮ್ಮೆ ವಾಹನಗಳು ಓಡಾಡುವಾಗಲೇ ಹವಾಮಾನ ವೈಪರಿತ್ಯ ಉಂಟಾಗಿ ಹೆಚ್ಚು ವಾಹನಗಳ ಅಪಘಾತ ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಸಿಚುವಾನ್ ಟಿಬೆಟ್ ಹೈವೇ
ಇದು ಚೀನಾ ದೇಶದ ಮುಖ್ಯ ಹೈವೆಗಳೊಂದಾಗಿದ್ದು, ದೇಶದ ಅತ್ಯಂತ ಎತ್ತರದ ರಸ್ತೆ. ಇಲ್ಲಿ ಯಾವಾಗ ಭೂಕುಸಿತ ಉಂಟಾಗುತ್ತದೆ ಎಂದು ಹೇಳುವುದು ಕಷ್ಟ. ಸಾಕಷ್ಟು ಬಾರಿ ಇದೇ ರೀತಿ ಆಗಿದ್ದು, ಅದೆಷ್ಟೋ ಜನ ಪ್ರಯಾಣದಲ್ಲಿ ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.