No menu items!
14.4 C
Munich
Sunday, May 3, 2026

ಅಧಿಕಾರ ಇದೆ ಎಂದು ಜನ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ಮಾಡುವುದು ಖಂಡನೀಯ: ಬಿವೈ ವಿಜಯೇಂದ್ರ

Must read

ಅಧಿಕಾರ ಇದೆ ಎಂದು ಜನ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ಮಾಡುವುದು ಖಂಡನೀಯ: ಬಿವೈ ವಿಜಯೇಂದ್ರ

ಬೆಂಗಳೂರು: ಅಧಿಕಾರ ಇದೆ ಎಂದು ಜನ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ಮಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದ ಕಂಠೀರವ ಸ್ಟುಡಿಯೋ ಬಳಿ ಮುನಿರತ್ನ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಅಧಿಕಾರ ಇದೆ ಎಂದು ಜನ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ಮಾಡುವುದು, ಅವಮಾನ ಮಾಡುವುದು ಖಂಡನೀಯವಾಗಿದೆ ಎಂದರು.
ಇನ್ನೂ ಮಂಜುನಾಥ್ ನಾಯಕ್ ಅಮಾನತು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಅಲ್ಲದೆ, ಅಧಿಕಾರದ ದರ್ಪ ನೆತ್ತಿಗೇರಿದರೆ ಆಡಳಿತದಲ್ಲಿ ಇದ್ದವರು ಹೇಗೆ ನಡೆದುಕೊಳ್ಳಬಹುದು ಎಂದು ಈ ಘಟನೆ ತೋರಿಸುತ್ತಿದೆ. ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಮೇಲೆ ಕ್ರಮ ಆಗಿಲ್ಲ. ಶಾಸಕರ ಮೇಲೆ ಹಲ್ಲೆ ಯತ್ನ ನಡೆಸಿದವರ ಮೇಲೆ ಯಾವುದೇ ಕ್ರಮ ಆಗಿಲ್ಲ. ಮುನಿರತ್ನ ಮೇಲೆ ಹಲ್ಲೆ ನಡೆದ ಘಟನೆ ಈಗ ಗೊತ್ತಾಗಿದೆ. ಈ ಕುರಿತಾಗಿಯೂ ನಾವು ಧ್ವನಿ ಎತ್ತುತ್ತೇವೆ ಎಂದರು.

- Advertisement -spot_img

More articles

- Advertisement -spot_img

Latest article