ಇಂದು ಮೆಟ್ರೋಗೆ ಹೋಗುತ್ತಿರುವವರು ಇದನ್ನು ಗಮನಿಸಿ

0
54

ಎಲಚೇನಹಳ್ಳಿ ಮತ್ತು ಅಂಜನಾಪುರ ಮಾರ್ಗದ ಹೊಸ ಮೆಟ್ರೋ ಸಂಚಾರದ ಕಾಮಗಾರಿಯಿಂದಾಗಿ ಇಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಹೌದು ಮೆಟ್ರೋ ಬಳಸುವವರು ಈ ಸುದ್ದಿಯನ್ನು ಗಮನಿಸಲೇಬೇಕು. ನಾಗಸಂದ್ರ ಮತ್ತು ಎಲಚೇನಹಳ್ಳಿ ಮಾರ್ಗದ ರೈಲುಗಳ ಸಂಚಾರ 2 ಗಂಟೆಗಳ ಕಾಲ ಇರುವುದಿಲ್ಲ..

 

ಬೆಳಗ್ಗೆ ಸುಮಾರು 11 ಗಂಟೆವರೆಗೂ ಸಹ ಎಲಚೇನಹಳ್ಳಿ ಇಂದ ನ್ಯಾಷನಲ್ ಕಾಲೇಜು ನಿಲ್ದಾಣದವರೆಗೆ ಯಾವುದೇ ರೀತಿಯ ಮೆಟ್ರೋ ಸಂಚಾರ ಇರುವುದಿಲ್ಲ. ಇಂದು ಬೆಳಗ್ಗೆಯೇ ನ್ಯಾಷನಲ್ ಕಾಲೇಜಿನ ಅವರಿಗೆ ಮಾತ್ರ ಮೆಟ್ರೋ ರೈಲು ಸಂಚಾರ ಮಾಡಿದೆ. ನರಸಿಂಹಾ ದಿಂದ ಹೊರಡುವ ರೈಲುಗಳು ನೇಷನಲ್ ಕಾಲೇಜಿನವರೆಗೆ ಮಾತ್ರ ತಲುಪಲಿವೆ. ಇನ್ನು ಈ ರೀತಿಯ ಬದಲಾವಣೆ ಇಂದು ಬೆಳಗ್ಗೆ ಹನ್ನೊಂದು ಗಂಟೆಯವರೆಗೆ ಮಾತ್ರ ಎಂದು ಹೇಳಲಾಗುತ್ತಿದ್ದು ತದನಂತರ ಇಂದಿನಂತೆ ಸಂಚಾರ ನಡೆಯಲಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಎಲಚೇನಹಳ್ಳಿ ಕಡೆಗೆ ಹೊರಟಿರುವವರು ಹಾಗೂ ಎಲಚೇನಹಳ್ಳಿ ಇಂದ ಹೊರಟಿರುವವರು ಈ ವಿಷಯವನ್ನು ಗಮನಿಸಿ ಹೊರಡಿ..

LEAVE A REPLY

Please enter your comment!
Please enter your name here