ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಕೋವಿಡ್ ಸುರಕ್ಷಾ ಪಡೆಯಿಂದ ಹಮ್ಮಿಕೊಳ್ಳಲಾದ ನಗರದ ಎಲ್ಲಾ ವಾರ್ಡ್ಗಳಿಗೆ ಸ್ಯಾನಿಟೈಜರ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಶ್ರೀ ಕೆ.ಎಸ್.ಈಶ್ವರಪ್ಪರವರು
ಕಳೆದ ವರ್ಷ ಶಿವಮೊಗ್ಗ ಕೊವಿಡ್ ಸುರಕ್ಷಾ ಪಡೆಯಿಂದ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ ಕೂಡ ಆಯುರ್ವೇದಿಕ್ ಕಿಟ್ ನ್ನು ನೀಡಿದ್ದಿವಿ ಇಡೀ ಶಿವಮೊಗ್ಗ ನಗರದ ಜನ ಸಂತೋಷ ಪಟ್ಟಿದ್ದರು.
ಅದರ ಮುಂದುವರೆದ ಭಾಗವಾಗಿ ಈಗ ಕೋವಿಡ್ ಸುರಕ್ಷಾ ಪಡೆ ಮತ್ತು ಸೇವಾ ಭಾರತಿಯವರ ಸಹಯೋಗದಲ್ಲಿ ನಗರದ ಎಲ್ಲ ವಾರ್ಡಗಳಲ್ಲೂ ಪ್ರತಿಯೊಂದು ಬೀದಿಗೂ ಕೂಡ ಸ್ಯಾನಿಟೈಸರ್ ಸಿಂಪರಣೆ ಮಾಡಬೇಕು ಅಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ 6 ಸ್ಯಾನಿಟೈಸರ್ ವಾಹನಗಳನ್ನು ಬಿಟ್ಟಿದೀವಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಭಾಗಶಃ ೩-೪ ದಿನದಲ್ಲಿ ಇಡೀ ಶಿವಮೊಗ್ಗ ನಗರದ ಎಲ್ಲ ವಾರ್ಡಗಳಲ್ಲು ಈ ಕಾರ್ಯ ಪೂರ್ಣಗೊಳ್ಳಲಿದೆ. ಒಂದು ರೀತಿಯಲ್ಲಿ ಕೊವಿಡ್ ನ್ನು ದೂರ ಮಾಡುವ ನಿಟ್ಟಿನಲ್ಲಿ ಅಂದರೆ ನಮ್ಮ ಹತ್ರ ಬರದ ರೀತಿಯಲ್ಲಿ ಎಲ್ಲ ಪ್ರಯತ್ನಗಳನ್ನ ಮಾಡುತ್ತಿದ್ದೇವೆ.