ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ ಎಂದರೆ ಅದು ಮೈಸೂರು ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತನಿಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲರ ಎದುರೇ ಕಪಾಳ ಮೋಕ್ಷ ಮಾಡಿದ ವಿಡಿಯೋ. ಹೌದು ಸಿದ್ದರಾಮಯ್ಯನವರು ಮಾಧ್ಯಮದವರ ಜೊತೆ ಮಾತನಾಡಿ ತೆರಳುತ್ತಿದ್ದಾಗ ನಂದನ ಹಳ್ಳಿ ರವಿ ಅವರು ಯಾರದ್ದೋ ಕರೆ ಬಂದಿದೆ ಎಂದು ಫೋನ್ ಅನ್ನು ಸಿದ್ದರಾಮಯ್ಯನವರಿಗೆ ನೀಡಿದರು.
ಹೀಗಾಗಿ ಸಿದ್ದರಾಮಯ್ಯನವರು ರವಿ ಅವರ ಕೆನ್ನೆಗೆ ಎಲ್ಲರೆದುರೇ ಬಾರಿಸಿದ್ದರು. ಈ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿ ತನ್ನ ದರ ಸಖತ್ ವೈರಲ್ ಆಯಿತು. ಇನ್ನು ಸಿದ್ದರಾಮಯ್ಯನವರು ರವಿ ಅವರ ಕೆನ್ನೆಗೆ ಬಾರಿಸಿದ್ದಕ್ಕೆ ಟ್ವಿಟ್ಟರ್ ನಲ್ಲಿ ಕಾರಣವನ್ನು ಹೇಳಿದ್ದು ನಂದನಹಳ್ಳಿ ರವಿ ಬರೀ ಕಾರ್ಯಕರ್ತ ಅಲ್ಲ ನನಗೆ ಪುತ್ರನ ಸಮಾನ ಹೀಗಾಗಿ ನಾನು ಆತನಿಗೆ ಹುಸಿಕೋಪದಿಂದ ಹೊಡೆದೆ , ಆತನ ಮೇಲೆ ಅಪಾರವಾದ ಪ್ರೀತಿ ಇದೆ ಇದನ್ನೇ ತಪ್ಪಾಗಿ ಅರ್ಥೈಸುವುದು ಬೇಡ ಎಂದು ಹೇಳಿದ್ದಾರೆ.