ಕನ್ನಡಿಗರಿಗೇಕೆ ಕೊಟ್ಟಿಲ್ಲ ಪ್ರತಿಷ್ಠಿತ ಮೇಯರ್ ಪಟ್ಟ !?

0
121

ಬಿಬಿಎಂಪಿ ಪ್ರತಿಷ್ಠಿತ ಮೇಯರ್ ಪಟ್ಟವನ್ನು ಕನ್ನಡಿಗರಿಗೇಕೆ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಬಿಎಂಪಿ ಎದುರು ಇಂದು ಪ್ರತಿಭಟನೆ ನಡೆಸಿದರು. ರಾಜಧಾನಿ ಬೆಂಗಳೂರಿನಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚಾಗಿದೆ. ಕನ್ನಡಿಗರು ಇಲ್ಲಿ ಅನಾಥರಾಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಹೊರಗಡೆಯಿಂದ ಬಂದವರಿಗೆ  ಪ್ರತಿಷ್ಠಿತ ಮೇಯರ್ ಪಟ್ಟವನ್ನು ಜೈನರಿಗೆ ನೀಡಲಾಗಿದೆ ಇದು  ಎಷ್ಟರ ಮಟ್ಟಿಗೆ ಸರಿ? ಬಿಜೆಪಿಯವರಿಗೆ ಸ್ಥಳೀಯರು ಯಾರೂ ಸಿಗಲಿಲ್ಲವೆ? ಈಗಾಗಲೇ ರಾಜಧಾನಿಯನ್ನು ಎಲ್ಲರೂ ಆವರಿಸಿಕೊಂಡಿದ್ದಾರೆ. ಈಗ ಪ್ರಥಮ ಪ್ರಜೆಯಾಗಿ ಇವರು ಅಲಂಕರಿಸಿದರೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಒಕ್ಕಲಿಗರನ್ನು ಮೇಯರ್ ಮಾಡಬೇಕೆಂದು ಸಾಕಷ್ಟು ಒತ್ತಡ ಹೇರಲಾಗಿತ್ತು.

LEAVE A REPLY

Please enter your comment!
Please enter your name here