No menu items!
10.2 C
Munich
Tuesday, April 21, 2026

ಕಾರಿಗೆ ಕಂಟೈನರ್ ಡಿಕ್ಕಿ, ಮದುವೆ ಮುಗಿಸಿ ಬರುತ್ತಿದ್ದ ಮೂವರು ಮೃತಪಟ್ಟಿದ್ದಾರೆ ..!

Must read

ಮದುವೆ ಮುಗಿಸಿಕೊಂಡು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಳೆಕೆರೆ ಗ್ರಾಮದ ಜಯಲಕ್ಷ್ಮಮ್ಮ (46) , ಕಾಮಸಂದ್ರದ ಕುಮಾರ್(28), ಶ್ರೀಪತಿ ಹಳ್ಳಿಯ ನರಸಮ್ಮ (45) ಮೃತಪಟ್ಟಿದ್ದು , ಗಂಗಲಕ್ಷ್ಮಮ್ಮ , ಪ್ರಶಾಂತ್ ಗಂಭೀರ ಗಾಯಗೊಂಡಿದ್ದಾರೆ.

ಕರೇನಹಳ್ಳಿಯಲ್ಲಿ ನಡೆದ ಮದುವೆಗೆ ತೆರಳಿದ್ದ ಈ ಐವರು ಹಿಂದಿರುಗುವಾಗ ನಿನ್ನೆ ರಾತ್ರಿ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಕಂಟೈನರ್ ಡಿಕ್ಕಿ ಹೊಡೆದಿದೆ.ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಮಾಗಡಿ-ಕುಣಿಗಲ್ ರಸ್ತೆಯ ಜನತಾ ಕಾಲೋನಿ ತಿರುವಿನಲ್ಲಿ ಬಿದ್ದಾಗ ಈ ದುರ್ಘಟನೆ ಸಂಭವಿಸಿದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article