No menu items!
29.2 C
Munich
Friday, September 4, 2026

ಕಾಲ್ನಡಿಗೆಯಲ್ಲಿ ಹೋಗಿ ‘ತಿರುಪತಿ’ ತಿಮ್ಮಪ್ಪನ ದರ್ಶನ ಪಡೆದ ಶಾಸಕ ಆನಂದ್ ಸಿಂಗ್ !

Must read

ಜುಲೈ 1 ರಂದು ಮೊದಲಿಗರಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಶಾಸಕರುಗಳ ಸಾಲುಸಾಲು ರಾಜೀನಾಮೆಗೆ ಅಡಿಪಾಯ ಹಾಕಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಶುಕ್ರವಾರದಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ತಮ್ಮ ಸಂಬಂಧಿಕರು ಹಾಗೂ ಬೆಂಬಲಿಗರೊಂದಿಗೆ ತಿರುಪತಿಯಿಂದ ತಿರುಮಲ ಬೆಟ್ಟದವರೆಗೆ ಕಾಲ್ನಡಿಗೆಯಲ್ಲಿ ತೆರಳಿದ ಆನಂದ್ ಸಿಂಗ್, ದೇವರ ದರ್ಶನ ಪಡೆದರು. ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಕುರಿತು ಸ್ಪೀಕರ್ ರಮೇಶ್ ಕುಮಾರ್ ಇನ್ನು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲದ್ದರ ಮಧ್ಯೆ ಆನಂದ್ ಸಿಂಗ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article