No menu items!
9.3 C
Munich
Wednesday, April 29, 2026

ಕೊರೊನಾ ರಣಕೇಕೆಗೆ ಕರುನಾಡು ತತ್ತರ!

Must read

ಕೊರೊನಾ ರಣಕೇಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಕೂಡಾ ಬರೋಬ್ಬರಿ 44,631 ಹೊಸ ಕೇಸ್‌ಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 16,90,934ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,64,363ಕ್ಕೆ ಏರಿದೆ.

ಇನ್ನು ಮಂಗಳವಾರ ಒಂದೇ ದಿನ 24,714 ಮಂದಿ ಗುಣಮುಖರಾಗಿರೋದು ಸಮಾಧಾನಕರ ಸಂಗತಿ. ಈ ಮೂಲಕ ರಾಜ್ಯದಲ್ಲಿ ಈವರೆಗೂ 12,10,013 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಎಲ್ಲಕ್ಕಿಂತಾ ಆಘಾತಕಾರಿ ಸಂಗತಿ ಇರೋದು ಸಾವಿನ ಲೆಕ್ಕಾಚಾರದಲ್ಲಿ..! ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 292 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಒಂದರಲ್ಲೇ 132 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 16,538ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ 100 ಮಂದಿಗೆ ಕೊರೊನಾ ವೈರಸ್ ಪತ್ತೆ ಪರೀಕ್ಷೆ ಮಾಡಿಸಿದರೆ, ಈ ಪೈಕಿ 30 ಮಂದಿಗೆ ಸೋಂಕು ತಗುಲಿರೋದು ದೃಢಪಡುತ್ತಿದೆ. ಖಚಿತತೆ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 29.03 ಇರೋದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಇನ್ನು ಜಿಲ್ಲೆಗಳ ಲೆಕ್ಕಾಚಾರ ನೋಡೋದಾದ್ರೆ, ಮಂಗಳವಾರ ಒಂದೇ ದಿನ 20,870 ಪ್ರಕರಣ ದಾಖಲಾಗಿರುವ ಬೆಂಗಳೂರು ನಗರ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನಕ್ಕಾಗಿ ಹಾಸನ ಹಾಗೂ ಮೈಸೂರು ಪೈಪೋಟಿ ನಡೆಸಿವೆ. ಮೈಸೂರಿನಲ್ಲಿ 2293 ಪ್ರಕರಣ ಪತ್ತೆಯಾಗುವ ಮೂಲಕ 2ನೇ ಸ್ಥಾನದಲ್ಲಿದ್ದರೆ, ಹಾಸನ ಜಿಲ್ಲೆ 2278 ಪ್ರಕರಣ ದೃಢಪಡುವ ಮೂಲಕ 3ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಮಂಡ್ಯ, ಕಲಬುರಗಿ, ತುಮಕೂರು ಹಾಗೂ ಬಳ್ಳಾರಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಯಾವ ಜಿಲ್ಲೆಯಲ್ಲೂ ಮಂಗಳವಾರ ಹೊಸ ಕೊರೊನಾ ಪ್ರಕರಣಗಳು ನಾಲ್ಕಂಕಿ ತಲುಪಿಲ್ಲ. ಆದ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾವಿರದ ಸನಿಹದಲ್ಲಿದ್ದು, ಮಂಗಳವಾರ ಒಂದೇ ದಿನ 996 ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 985 ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article