No menu items!
26.3 C
Munich
Thursday, June 18, 2026

ಡಿಕೆಶಿ BJPಗೆ ಸೇರುವ ಪ್ಲಾನ್: ಯತ್ನಾಳ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

Must read

ಡಿಕೆಶಿ BJPಗೆ ಸೇರುವ ಪ್ಲಾನ್: ಯತ್ನಾಳ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆ ಆಗಿರುವ ಯತ್ನಾಳ್ ಮೊದಲು ತಾವು ಯಾಕೆ ಪಕ್ಷದಿಂದ ಹೊರಗಡೆಗಾದರು ಎಂಬುದನ್ನು ತಿಳಿದುಕೊಳ್ಳಲಿ. ನಂತರ ನಮ್ಮ ಪಕ್ಷ, ನಮ್ಮ ಅಧ್ಯಕ್ಷರು ಮತ್ತು ನಮ್ಮ ಸಿಎಂ ಕುರಿತು ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಬಿಜೆಪಿ ಸೇರುವ ಸಿದ್ಧತೆ ನಡೆಸಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯಲ್ಲಿರುವವರಿಗೆ ಸ್ವಂತ ಅಸೆಸ್ಮೆಂಟ್ ಮಾಡಿಕೊಳ್ಳಲೂ ಆಗುತ್ತಿಲ್ಲ. ಯತ್ನಾಳ್ ತಾವು ಪಕ್ಷದಿಂದ ಹೊರಹೋಗಿದ್ದೇಕೆ ಎಂಬುದನ್ನೇ ಇನ್ನೂ ತಿಳಿದಿಲ್ಲ. ಹಾಗಿದ್ದಾಗ ನಮ್ಮ ಅಧ್ಯಕ್ಷರ ಬಗ್ಗೆ ವಿಮರ್ಶೆ ಮಾಡಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
,ಬಿಜೆಪಿಯಲ್ಲಿ ಯಾರು ಹೊರಗೆ ಹೋಗ್ತಾರೆ, ಯಾರು ಒಳಗೆ ಬರುತ್ತಾರೆ ಎಂಬುದು ಅವರಿಗೇ ತಿಳಿಯದು. ಸೆಲ್ಫ್ ಅಸೆಸ್ಮೆಂಟ್ ಮಾಡಿಕೊಳ್ಳುವುದಲ್ಲೇ ಅವರು ವಿಫಲರಾಗಿದ್ದಾರೆ. ಇಂತಹವರು ನಮ್ಮ ಪಕ್ಷ, ನಮ್ಮ ಸಿಎಂ ಮತ್ತು ಡಿ.ಕೆ. ಶಿವಕುಮಾರ್ ಕುರಿತು ಅಸೆಸ್ ಮಾಡುವ ಹಕ್ಕೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

- Advertisement -spot_img

More articles

- Advertisement -spot_img

Latest article