No menu items!
14 C
Munich
Sunday, April 19, 2026

ತಾನು ಓದದಿದ್ದರೂ ಪತ್ನಿಯನ್ನು ಓದಿಸಿ ತಹಶೀಲ್ದಾರ್ ಮಾಡಿದ ಕಡ್ಡಿ ಸೀನ ಕೊರೊನಾಗೆ ಬಲಿ

Must read

ಶಿವಮೊಗ್ಗ: ತಾನು ಓದದಿದ್ದರೂ ತನ್ನ ಪತ್ನಿಯನ್ನು ಕೆಎಎಸ್ ಶಿಕ್ಷಣ ಕೊಡಿಸಿ ತಹಶೀಲ್ದಾರ್ ಮಾಡಿದ್ದ ರೌಡಿ‌ ಶೀಟರ್ COVIDಗೆ ಬಲಿಯಾಗಿದ್ದಾನೆ.

ಶ್ರೀನಿವಾಸ್​ ಅಲಿಯಾಸ್​ ಕಡ್ಡಿ ಸೀನ ಕೊರೊನಾಗೆ ಬಲಿಯಾದವ. ಇಲ್ಲಿನ ಕಾಮಾಕ್ಷಿ‌ ಬೀದಿಯ‌ ನಿವಾಸಿಯಾದ ಶ್ರೀನಿವಾಸ್ ಈ ಹಿಂದೆ ರೌಡಿ ಶೀಟರ್ ಆಗಿದ್ದನಂತೆ. ಈತ ಕಾರಬ್ ಶಿವುನ ಪ್ರಾಣ ಸ್ನೇಹಿತ.

ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದ ಸೀನ, ಆಕೆಯನ್ನು ಕೆಎಎಸ್ ಓದಿಸಿ ಕಳೆದ ಎರಡು ವರ್ಷದ ಹಿಂದೆ ತಹಶೀಲ್ದಾರ್ ಆಗಿ ಉದ್ಯೋಗ ದೊರಕುವಂತೆ ಮಾಡಿದ್ದ. ಆದರೆ ವಿಧಿಯ ಆಟಕ್ಕೆ ಶ್ರೀನಿವಾಸ್ ಬಲಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ಜ್ವರ ಎಂದು ಮೆಗ್ಗಾನ್ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಶ್ರೀನಿವಾಸ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಅಪಘಾತವಾಗಿ ಬಿಲಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ‌ಕೊಂಡಿದ್ದ ಶ್ರೀನಿವಾಸ್ ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದ. ಈತನಿಗೆ 7 ವರ್ಷದ ಮಗ ಇದ್ದಾನೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article