No menu items!
19.8 C
Munich
Wednesday, July 29, 2026

ದಲಿತ ಸಿಎಂ ವಿಚಾರ ಅದು 2013 ರಿಂದಲೂ ಓಡುತ್ತಲೆ ಇದೆ: ಸತೀಶ್ ಜಾರಕಿಹೊಳಿ

Must read

ಬೆಂಗಳೂರು: ದಲಿತ ಸಿಎಂ ವಿಚಾರ ಅದು 2013 ರಿಂದಲೂ ಓಡುತ್ತಲೆ ಇದೆ. 5 ವರ್ಷ ಅದೆ ಓಡಿತು ಆದರೆ ಪಿಚ್ಚರ್ ರಿಲೀಸ್ ಆಗಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಖರ್ಗೆಯವರು ಇದ್ದರು ಆಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು ಅವರಿಗೆ ಡಿಸಿಎಂ ಆಗೋಕು ಆಗಲಿಲ್ಲ.ಎರಡುವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ ಇದಾರೆ, ಡಿಸಿಎಂ ಇದಾರೆ ಪಕ್ಷದ ಅಧ್ಯಕ್ಷರ ಇದ್ದಾರೆ ಹೈ ಕಮಾಂಡ್ ನಾಯಕರಿದ್ದರೆ ಅದೆಲ್ಲಾ ಅವರು ತೀರ್ಮಾನ ಮಾಡ್ತಾರೆ ಎಂದರು.
ಹಾಗೆ ಸಿಎಂ ಕರೆದ ಸಭೆಗೆ ನಾನು ಬಂದಿರಲಿಲ್ಲ.ಅನಾರೋಗ್ಯದ ಕಾರಣ ನಾನು ಬಂದಿರಲಿಲ್ಲ.ಅದನ್ನ ಸಿಎಂ ಗಮನಕ್ಕೆ ತಂದಿದ್ದೆ.ಬರಲಿಲ್ಲ ಅಂದ ಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ.ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ. ಯಾರು ಮಾತನಾಡಬಾರದು ಅನ್ನೋದು ಸರಿ ಇದೆ.ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತೆ ಎಂದು ಹೇಳಿ ಸುಮ್ಮನಾದರು.

- Advertisement -spot_img

More articles

- Advertisement -spot_img

Latest article