No menu items!
12.3 C
Munich
Thursday, April 30, 2026

“ದೇವೇಗೌಡರೇನು ಆಕಾಶದಿಂದ ಇಳಿದು ಬಂದಿದ್ದರಾ ” ಎಂದು ಪ್ರಶ್ನಿಸಿದ ರಾಜಣ್ಣ !?

Must read

ಲೋಕಸಭಾ ಚುನಾವಣೆ ಬಳಿಕ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಮಾಜಿ ಶಾಸಕ ಕೆ.ಎನ್.‌ ರಾಜಣ್ಣ, ಪರಮೇಶ್ವರ್‌ ವಿರುದ್ದ ಮಾಡಿರುವ ಟೀಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು, ಪರಮೇಶ್ವರ್‌ 50 ವರ್ಷಗಳಿಂದ ಸ್ನೇಹಿತರು. ನಮ್ಮಿಬ್ಬರ ನಡುವಿನ ಜಗಳ ಹೊಸದೇನಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿನ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ರಾಜಣ್ಣ, ಯಾಕೆ ದೇವೇಗೌಡರ ಸೋಲನ್ನೇ ಹೈಪ್‌ ಮಾಡಲಾಗುತ್ತಿದೆ. ಅವರೇನು ಆಕಾಶದಿಂದ ಇಳಿದು ಬಂದಿದ್ದರಾ ಎಂದು ಪ್ರಶ್ನಿಸಿದರಲ್ಲದೇ ಈ ಚುನಾವಣೆಯಲ್ಲಿ ಸೋಲನುಭವಿಸಿದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ನಾಯಕರಲ್ಲವೇ ಎಂದು ಕೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article