ಸಿಡಿ ಲೇಡಿ ಲಿಖಿತ ದೂರು ನೀಡಿದ ಬೆನ್ನಲ್ಲೇ ಇದೀಗ ವಕೀಲರು ಮತ್ತೆ ಸಹೋದರನ ಜೊತೆ ಸಭೆ ನಡೆಸಿದ ಬಳಿಕ ರಮೇಶ್ ಜಾರಕಿಹೊಳಿ ಸಿನಿಮೀಯ ಡೈಲಾಗ್ ಹೊಡೆದಿದ್ದಾರೆ. ಹೌದು ಸಿಡಿ ಲೇಡಿ ಲಿಖಿತ ದೂರನ್ನು ಸಲ್ಲಿಸಿದ ನಂತರ ವಕೀಲರ ಜೊತೆ ಚರ್ಚಿಸಿದ ಬಳಿಕ ರಮೇಶ್ ಜಾರಕಿಹೊಳಿ ಅವರು ನಾಳೆಯಿಂದ ನಮ್ಮ ಆಟ ಶುರು ಹತ್ತು ಸಿಡಿ ಬಂದರೂ ಸಹ ನಾನು ಹೆದರುವುದಿಲ್ಲ ಮಹಾ ನಾಯಕ ಯಾರು ಎಂಬುದು ತಿಳಿಯುತ್ತದೆ ಎಂದು ಡೈಲಾಗ್ ಹೊಡೆದಿದ್ದಾರೆ.
ನಾನು ಇಲ್ಲೇ ಸದಾಶಿವನಗರದ ನಿವಾಸದಲ್ಲಿಯೇ ಇದ್ದೇನೆ. ಇಲ್ಲಿ ಕುಳಿತುಕೊಂಡೆ ಅಂತಹ ಸರ್ಕಾರವನ್ನೇ ತೆಗೆದಿದ್ದೇವೆ ಇನ್ನೂ ಈ ಪ್ರಕರಣಗಳೆಲ್ಲ ನಮಗೆ ಯಾವ ಲೆಕ್ಕ ಎಂದು ಸಿಡಿ ಪ್ರಕರಣವನ್ನು ಎದುರಿಸಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ರಮೇಶ್ ಜಾರಕಿಹೊಳಿ ಅವರು ವ್ಯಕ್ತಪಡಿಸಿದ್ದಾರೆ.