ಪುನೀತ್ ವರ್ಕೌಟ್ ಗೆ ಧೋನಿ ಫಿದಾ

0
62

ಇದೇ ಏಪ್ರಿಲ್ ಒಂದನೇ ತಾರೀಕಿನ ದು ಯುವರತ್ನ ಚಿತ್ರ ದೇಶದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಯುವರತ್ನ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರದ ಪ್ರಮೋಷನ್ ಶುರು ಮಾಡಿರುವ ಯುವರತ್ನ ಚಿತ್ರತಂಡ ಇತ್ತೀಚೆಗಷ್ಟೇ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ವನ್ನು ನೀಡಿದೆ.

 

ಹೀಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಷಯ ಚರ್ಚೆಯಾಗಿದೆ. ಪುನೀತ್ ಅವರ ವರ್ಕೌಟ್ ವಿಷಯ ಬಂದಾಗ ಮಾತನಾಡಿದ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಮಹೇಂದ್ರ ಸಿಂಗ್ ಧೋನಿ ಅವರು ಕರೆ ಮಾಡಿ ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಡಿಯೋ ಗೆ ಪ್ರಶಂಸೆ ವ್ಯಕ್ತಪಡಿಸಿ ತನ್ನ ಬಹಿರಂಗಪಡಿಸಿದ್ದಾರೆ.

 

 

ಹೌದು ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಡಿಯೋ ವೀಕ್ಷಿಸಿದ ಮಹೇಂದ್ರ ಸಿಂಗ್ ಧೋನಿ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ಕರೆ ಮಾಡಿ ವರ್ಕೌಟ್ ಬಗ್ಗೆ ಹೊಗಳಿದ್ದರು ಎಂಬ ವಿಷಯವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಹಂಚಿಕೊಂಡರು.

LEAVE A REPLY

Please enter your comment!
Please enter your name here