No menu items!
11.1 C
Munich
Wednesday, April 29, 2026

ಪ್ರಿಯಾಂಕ ಗಾಂಧಿ ಮುಟ್ಟಿದ್ದಕ್ಕೆ ಅಪವಿತ್ರವಾದ ಭಗತ್ ಸಿಂಗ್ ಗೆ ಹಾಲಿನ ಅಭಿಷೇಕ..! ಕಂಗಾಲಾದ ಪ್ರಿಯಾಂಕ ಗಾಂಧಿ..?

Must read

ಕಾಂಗ್ರೆಸ್ ನ ಯುವರಾಣಿ ಪ್ರಿಯಾಂಕಾ ಗಾಂಧಿಗೂ ಸಿಖ್ ಪ್ರತಿಭಟನೆಯ ಬಿಸಿ ಮುಟ್ಟಿದೆ.
ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಪಂಜಾಬ್ ಗೆ ತೆರಳಿದರು ಇದೇ ಸಮಯದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ ಇಂದೋರ್ ನಲ್ಲಿರುವ ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಪ್ರತಿಮೆಗೆ ಹಾರವನ್ನು ಹಾಕುವುದರಮೂಲಕ ನಮನವನ್ನು ಸಲ್ಲಿಸಿದರು.

ಆದರೆ ಈ ಘಟನೆ ನಡೆದ ಸ್ವಲ್ಪ ಸಮಯದಲ್ಲಿ ಭಗತ್ ಸಿಂಗ್ ಪ್ರತಿಮೆ ಬಳಿ ಬಂದ ಕೆಲವು ಸಿಖ್ ಸಮುದಾಯದ ಮುಖಂಡರು ಭಗತ್ ಸಿಂಗ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡುವುದರ ಮೂಲಕ ಪ್ರತಿಮೆಯನ್ನು ಸ್ವಚ್ಛ ಗೊಳಿಸಿರುವ ಘಟನೆ ನಿನ್ನೆ ನಡೆದಿದೆ.


ಕಾಂಗ್ರೆಸ್ನವರು ಸಿಖ್ ವಿರೋಧಿಗಳು ಅವರು ಮುಟ್ಟಿದ್ದರಿಂದ ಭಗತ್ ಸಿಂಗ್ ಪ್ರತಿಮೆ ಅಪವಿತ್ರ ಗೊಂಡಿದೆ ಅದಕ್ಕಾಗಿ ಪ್ರತಿಮೆಯನ್ನು ಹಾಲಿನಿಂದ ಶುದ್ಧಗೊಳಿಸಿದ್ದೇವೆ ಎಂದು ತಮ್ಮ ಕಾರ್ಯವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.


1984 ರ ಸಿಖ್ ದಂಗೆಯ ಬಳಿಕ ಗಾಂಧಿ ಕುಟುಂಬದವರ ವಿರುದ್ಧ ಪಂಜಾಬ್ ನಲ್ಲಿ ಆಗಾಗ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ ಇತ್ತೀಚೆಗೆ ಪಿತ್ರೋಡ ಹೇಳಿರುವ ಹೂವಾ ತೋ ಹೂವ ಎನ್ನುವ ಮಾತು ಕೂಡ ಹಳೆಯ ಕೋಪವನ್ನ ಮತ್ತೆ ಕೆದಕಿದಂತಾಗಿದೆ ಹೀಗಾಗಿ ಪಂಜಾಬ್ ನಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗಿದ್ದು ಅದರ ಬಿಸಿ ಇದೀಗ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೂ ತಟ್ಟಿದಂತೆ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article