No menu items!
12.4 C
Munich
Wednesday, April 29, 2026

ಬಿಗ್ ಬಾಸ್ ಕಪ್ ಗೆದ್ದ ಮಂಜು ಪಾವಗಡ!

Must read

ಮಂಜು ತುಂಟಾಟಕ್ಕೆ ಬಿಗ್‍ಬಾಸ್ ಒಂದು ಒಳ್ಳಯೆ ಪನಿಶ್ಮೆಂಟ್ ಕೊಟ್ಟಿದ್ದಾರೆ. ಮನೆಯಲ್ಲಿ ಹೆಚ್ಚು ತುಂಟಾಟದ ವೇಳೆ ಮಂಜು ಕೆಲವು ಎಡವಟ್ಟುಗಳನ್ನು ಮಾಡುತ್ತಿರುತ್ತಾರೆ. ಇದೀಗ ಒಂದು ಒಳ್ಳೆಯ ಶಿಕ್ಷೆಯನ್ನು ಮಂಜುಗೆ ಬಿಗ್‍ಬಾಸ್ ನೀಡಿದ್ದಾರೆ.

2ದಿನದಿ ಹಿಂದೆ ದಿವ್ಯ ಸುರೇಶ್ ಮತ್ತು ಮಂಜುಪಾವಗಡ ಮಾತನಾಡುತ್ತಾ ಕುಳಿತ್ತಿದ್ದರು. ಈ ವೇಳೆ ಮಂಜು ಅಲ್ಲಿಂದ ಎದ್ದು ಹೋಗುವ ವೇಳೆ ಕಾಫಿ ಕಪ್ ಕೆಳಗೆ ಬಿದ್ದು ಒಡೆದು ಹೋಗಿತ್ತು. ಇದನ್ನು ಮನೆಯವರಿಗೆ ತಿಳಿಯದಂತೆ ಮಂಜು ಕಸದ ಬುಟ್ಟಿಯಲ್ಲಿ ಅಡಗಿಸಿಟ್ಟಿದ್ದರು. ಕಪ್ ಒಡೆದಿರುವ ವಿಚಾರವಾಗಿ ಮಂಜು ಬಿಗ್‍ಬಾಸ್ ಬಳಿ ಕ್ಷಮೆಯನ್ನು ಕೇಳಿದ್ದರು. ಆದರೆ ಬಿಗ್‍ಬಾಸ್ ಪನಿಶ್ಮೆಂಟ್ ನೀಡಿದ್ದಾರೆ. ಮಂಜು ಅವಸ್ಥೆಯನ್ನು ಕಂಡ ಮನೆಮಂದಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಮಂಜು ತಪ್ಪಿಗೆ ಮನೆಗೆ ಬಂತು ಪುಟಾಣಿ ಕಪ್!
ಮಂಜುನ ತಪ್ಪಿಗೆ ಬಿಗ್‍ಬಾಸ್ ಪುಟಾಣಿ ಕಪ್ ಒಂದನ್ನು ಮಂಜುಗಾಗಿ ಕಳಿಸಿಕೊಟ್ಟಿದ್ದಾರೆ. ಬಿಗ್ ಬಾಸ್ ಮುಂದಿನ ಆದೇಶದವರೆಗೆ ಮಂಜು ಈ ಪುಟಾಣಿ ಕಪ್‍ನಲ್ಲಿಯೇ ನೀರು, ಕಾಫಿಯನ್ನು ಕುಡಿಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ. ಸುಮಾರು 4 ಟೀ ಸ್ಪೂನ್ ನೀರು ಹಿಡಿಯುವ ಕಪ್ ಇದಾಗಿದೆ. ಈ ಕಪ್ ನೋಡಿದ ಮಂಜು ಅಯ್ಯಯಪಾ ಇದರಲ್ಲಿ ಎಷ್ಟು ಸಲ ನೀರು ಕುಡಿಬೇಕು ಎಂದು ಕಾಮಿಡಿಯಾಗಿ ಹೇಳುತ್ತಾ ಬಿಗ್‍ಬಾಸ್ ನೀಡಿರುವ ಕಪ್‍ನಲ್ಲಿ ನೀರು ಕುಡಿದಿದ್ದಾರೆ. ಪುಟಾಣಿ ಕಪ್ ನೋಡಿ ಮಂಜು ಕಂಗಲಾಗಿದ್ದಾರೆ ಮನೆ ಮಂದಿ ಮಾತ್ರ ಮಂಜುನನ್ನು ನೋಡಿ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಮಂಜು ಪಾವಗಡ ಕಳ್ಳಾಟಕ್ಕೆ ಬಿಗ್‍ಬಾಸ್ ಸಖತ್ ಫನ್ನಿಯಾಗಿರುವ ಪನಿಶ್ಮೆಂಟ್ ನೀಡಿದ್ದಾರೆ. ಮಂಜು ಈ ಪುಟಾಣಿ ಕಪ್ ಬಳಕೆಯನ್ನು ಹೇಗೆ ಮಾಡುತ್ತಾರೆ. ಬಿಗ್‍ಬಾಸ್ ಆದೇಶ ಬರುವ ಮೊದಲೇ ಮರೆತು ರೂಲ್ಸ್ ಬ್ರೇಕ್ ಮಾಡುತ್ತಾರ ಎಂದು ಕಾದುನೋಡಬೇಕಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article