No menu items!
13 C
Munich
Monday, April 20, 2026

ಬಿಪಿನ್ ರಾವತ್ ಬಗ್ಗೆ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಇದೇ ಗತಿ!

Must read

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ಒಂದೆಡೆ ಇಡೀ ದೇಶವೇ ಬಿಪಿನ್ ರಾವತ್ ಸಾವಿಗೆ ಕಂಬನಿ ಮಿಡಿಯುತ್ತಿದೆ. ಇನ್ನೊಂದೆಡೆ ರಾಜಸ್ಥಾನದಲ್ಲಿ ಕಿಡಿಗೇಡಿಯೋರ್ವ ಬಿಪಿನ್ ರಾವತ್ ಸಾವು ಸಂಭ್ರಮಿಸಿ ಪೋಸ್ಟ್ವೊಂದು ಹಾಕಿ ಜೈಲು ಸೇರಿದ್ದಾನೆ.

 

ಜವ್ವಾದ್ ಖಾನ್ ಎಂಬ ಕಿಡಿಗೇಡಿ ಬಿಪಿನ್ ರಾವತ್ ಫೋಟೋ ಪೋಸ್ಟ್ ಮಾಡಿ, ನರಕಕ್ಕೆ ಹೋಗುವ ಮೊದಲೇ ಈತನ ದೇಹ ಸುಟ್ಟು ಹೋಯ್ತು ಎಂದು ಕೆಟ್ಟದಾಗಿ ಬರೆದುಕೊಂಡಿದ್ದಾನೆ. ಈ ಸಂಬಂಧ ಈಗ ರಾಜಸ್ತಾನ ಪೊಲೀಸರು ಕಿಡಿಗೇಡಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

 

ಇನ್ನು, ಜವ್ವದ್ ಖಾನ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಇಸ್ಲಾಮಿಕ್ ಫಂಡಮೆಂಟಲಿಸ್ಟ್ ಎಂದು ಗುರುತಿಸಿಕೊಂಡಿದ್ದಾನೆ. ಅಲ್ಲದೇ ಉಗ್ರ ತಾಲಿಬಾನ್ ಸಂಘದ ಪರ ಹಲವು ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ. ಈಗ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ದೂರದಲ್ಲಿ ಎಲ್ಲೋ ಅಲ್ಲ.. ಕರ್ನಾಟಕದಲ್ಲೂ ಇಂದು ಹಲವಾರು ಕಿಡಿಗೇಡಿಗಳು ಸೋಶಿಯಲ್​​ ಮೀಡಿಯಾಗಳಲ್ಲಿ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ವಿಷವನ್ನು ಉಗುಳಿದ್ದಾರೆ. ಫೇಸ್​​ಬುಕ್​, ಟ್ವಿಟರ್​ನಲ್ಲಿ ಅಂಥ ಕಿಡಿಗೇಡಿಗಳು ಹಲವರಿದ್ದಾರೆ. ಕೇವಲ ಕಮೆಂಟ್​ ಹಾಕೋದು ಮಾತ್ರವಲ್ಲ, ಇನ್ನೂ ಹಲವರು ನಗುವಿನ ಎಮೋಜಿ ಹಾಕಿರೋದು ಕೂಡ ಕಂಡು ಬಂದಿದೆ. ಈ ಬಗ್ಗೆ ರಾಜ್ಯದ ಪೊಲೀಸರು ಏನಾದ್ರೂ ಕ್ರಮ ತೆಗೆದುಕೊಳ್ಳುತ್ತಾರಾ? ಅಥವಾ ಸುಮ್ಮನಾಗ್ತಾರಾ? ಅಂತ ಹಲವರು ಪ್ರಶ್ನಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article