No menu items!
14.7 C
Munich
Saturday, July 25, 2026

ಬೆಂಗಳೂರಿನಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ಬೇಕರಿ ನುಗ್ಗಿ ಗಾಜಿನ ಬಾಟೆಲ್ ನಿಂದ ಹಲ್ಲೆ

Must read

  • ಬೆಂಗಳೂರಿನಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ಬೇಕರಿ ನುಗ್ಗಿ ಗಾಜಿನ ಬಾಟೆಲ್ ನಿಂದ ಹಲ್ಲೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಬೇಕರಿ ನುಗ್ಗಿ ಗಾಜಿನ ಬಾಟೆಲ್ ನಿಂದ ಹಲ್ಲೆ ಮಾಡಿರುವ ಘಟನೆ ಸಂಜಯ್ ನಗರದ ಭೂಪ ಸಂದ್ರದಲ್ಲಿ ನಡೆದಿದೆ.
ಸಿಗರೇಟ್ ವಿಚಾರಕ್ಕೆ ವಿಶ್ವ ಅನ್ನೋ ಪುಂಡ ಎಂಟ್ರಿ ಕೊಟ್ಟಿದ್ದು, ಮಾತಿಗೆ ಮಾತು ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಕ್ಷಣಾರ್ಧದಲ್ಲಿ ತಾರಕಕ್ಕೆ ತಿರುಗಿ ಇಬ್ಬರಿಂದ ಹಲ್ಲೆ ನಡೆಸಲಾಗಿದೆ. ಬೇಕರಿ ಒಳಗೆ ಇದ್ದ ಯುವಕನ ಮೇಲೆ ಸ್ಪ್ರೈಟ್ ಬಾಟಲ್ ನಿಂದ ಹೊಡೆದು ಕೊಲೆಗೆ ಯತ್ನ ನಡೆದಿದೆ. ಕೊಂಚ ಯಾಮಾರಿದ್ರೂ ಬೇಕರಿ ಯುವಕನ ತಲೆಗೆ ಗಂಭೀರ ಗಾಯ ಆಗ್ತಿತ್ತು. ಹಲ್ಲೆ ಮಾಡೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

- Advertisement -spot_img

More articles

- Advertisement -spot_img

Latest article