No menu items!
19.4 C
Munich
Friday, May 1, 2026

ಮಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಬೃಹತ್ ಸಮಾವೇಶ .

Must read

 

ದಕ್ಷಿಣ ಕನ್ನಡ , ಉಡುಪಿ ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಸಮಾವೇಶ

ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಭಾಷಣ

ಪುಲ್ವಾಮಾ ದುರಂತದಲ್ಲಿ ಮಡಿದ ರಾಜ್ಯದ ಯೋಧನ ಸ್ಮರಣೆ

ಮಂಡ್ಯದ ಯೋಧ ಗುರುವಿಗೆ ಶ್ರದ್ಧಾಂಜಲಿ ಅರ್ಪಿಸಿದ ಗೃಹ ಸಚಿವ ಪುಲ್ವಾಮಾ ದುರಂತದ ಬಳಿಕ ನಮ್ಮ ಸೇನೆ ಪ್ರತಿದಾಳಿ ನಡೆಸಿದೆ ,ಪಾಕಿಸ್ಥಾನದ ನೆಲದಲ್ಲಿ ಅಡಗಿದ್ದ ಉಗ್ರರನ್ನು ಬೇಟೆಯಾಡುವ ಪ್ರಯತ್ನ ನಡೆಸಿದೆ ,ಪಾಕಿಸ್ಥಾನದ ಎಫ್ -16 ಜೆಟ್ ಹೊಡೆದುರುಳಿಸಿದ ವಾಯುಸೇನೆಗೆ ಅಭಿನಂದಿಸುತ್ತೇನೆ

ಆದರೆ, ಕೆಲವು ಒಸಾಮಾ ಜೀ ಎನ್ನುವವರು ಸೇನಾದಾಳಿಗೆ ಸಾಕ್ಷ್ಯ ಕೇಳುತ್ತಿದ್ದಾರೆ ,ಭಾರತ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿದೆ

ಭಯೋತ್ಪಾದಕ ಪಾತಾಳದಲ್ಲಿ ಅಡಗಿದ್ರೂ ಹೊಡೆದು ಹಾಕೋ ತಾಕತ್ತಿದೆ

ಸಮಾವೇಶ ದಲ್ಲಿ ಮೂರನೇ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ ಎನ್ನುವ ಸೂಚನೆ ನೀಡಿದ ಗೃಹಸಚಿವ,

ಆದರೆ ಮೂರನೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದ ಸಚಿವ ರಾಜನಾಥ್ ಸಿಂಗ್,

ಉರಿ , ಹಾಗು ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ ನಡೆದ 2 ಸರ್ಜಿಕಲ್ ಸ್ಟ್ರೈಕ್ . ಅದನ್ನು ಹೊರತು ಪಡಿಸಿ ನಡೆದ ಮೂರನೇ ಸರ್ಜಿಕಲ್ ಸ್ಟ್ರೈಕ್ ಭಾರತೀಯ ಸೇನೆ ನಡೆಸಿದೆ ಎಂದ ಕೇಂದ್ರ ಗೃಹಸಚಿವ,

ನಾವು ದೇಶವನ್ನು ಬಲಿಷ್ಠರಾಷ್ಟ್ರವನ್ನಾಗಿಸ ಬಯಸುತ್ತೇವೆ

ನಾವು ಭಾರತವನ್ನು ಸೂಪರ್ ಪವರ್ ಮಾತ್ರವಲ್ಲ, ವಿಶ್ವಗುರುವಿನ ಸ್ಥಾನದಲ್ಲಿ ನೋಡಬಯಸುತ್ತೇವೆ

ನಮಗೆ ಎಲ್ಲಾ ಧರ್ಮೀಯರು ಸಮಾನರಾಗಿದ್ದು, ಯಾವುದೇ ಬೇಧಭಾವವಿಲ್ಲ

ಪಾಕಿಸ್ತಾನದ ಮೇಲೆ ದಾಳಿ ಬಳಿಕವೂ ವಿದೇಶಾಂಗ ಸಚಿವೆಯನ್ನು ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಆಪರೇಶನ್ ಸ್ವಾಗತಿಸಿದೆ

ಕೇಂದ್ರ ಸರಕಾರದಿಂದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲಾಗುವುದು ,ಎಲ್ಲಾ ರಾಜ್ಯ ಸರಕಾರಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ

ಕಾಶ್ಮೀರಿ ವಿದ್ಯಾರ್ಥಿಗಳು ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿಯಾಗದಂತೆ  ಬಿಜೆಪಿ ಕಾರ್ಯಕರ್ತರು ರಕ್ಷಣೆಗೆ ಮುಂದಾಗಬೇಕು

ಅವರಿಗೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ,ಕರ್ನಾಟಕದ 28 ಸೀಟುಗಳಿದ್ದು, 22 ಸೀಟುಗಳನ್ನು ನಮ್ಮದಾಗಿಸಿಕೊಳ್ಳಲು ಎಲ್ಲಾ ಪ್ರಯತ್ನ ಕಾರ್ಯಕರ್ತರು ನಡೆಸಬೇಕು ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article