ಮತ್ತೆ ಮರಳಿ ಗೂಡಿಗೆ ಅಂತಿದ್ದಾರೆ ಜಗದೀಶ್ ಶೆಟ್ಟರ್ !

0
82

ಮತ್ತೆ ಮರಳಿ ಗೂಡಿಗೆ ಅನ್ನೊಹಾಗೇ ಜಗದೀಶ್ ಶೆಟ್ಟರ್ ಬಿಜೆಪಿ ಗೆ ವಾಪಾಸ್ಸಾಗುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ನೀಡಲಿಲ್ಲಾ ಅನ್ನೊ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದರು. ಮತ್ತೆ ಶೆಟ್ಟರ್ ಅವರನ್ನ ಬಿಜೆಪಿಗೆ ಕರೆತರಲು ತೆರೆ ಮರೆಯಲ್ಲಿ ಪ್ಯ್ಲಾನ್ ಮಾಡಿಕೊಳ್ಳಲಾಗಿತ್ತು. ಈ ಮೊದಲು ಬಿಎಸ್ ಯಡಿಯೂರಪ್ಪ ವಿಜಯೇಂದ್ರ ಹಾಗೂ ಅಮೀತ್ ಶಾ ಒಮ್ಮೆ ಮಾತುಕತೆ ನಡೆಸಿದ್ದರು. ಆ ವಿಚಾರ ಸಹ ಈಗ ಬಹಿರಂಗವಾಗಿದ್ದು, ಶೆಟ್ಟರ್ ವಾಪಸ್ ಬರುವುದು ಪಕ್ಕಾ ಆಗಿದೆ.

ಈಗ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಸಿ ಮಾತುಕತೆ ಯಶಸ್ವಿ ಆಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಾಪಸ್ ಆಗ್ತಾರೆ ಅನ್ನೊ ಮಾಹಿತಿ ಇದೆ. ಇಂದೇ ಅಧಿಕೃತವಾಗಿ ಸೇರ್ಪಡೆಯಾಗ್ತಾರೆ ಎಂದು ಹೇಳಲಾಗುತ್ತಿದೆ.