ಮೈಸೂರಿನಲ್ಲಿ ಪುನೀತ್ ಯುವರತ್ನ ಚಿತ್ರೀಕರಣದ ವೇಳೆ ದರ್ಶನ್ ಫ್ಯಾನ್ಸ್ ಗೆ ಬಿತ್ತಾ ಏಟು?! ನಡೆದಿದ್ದೇನು ಈ ಸುದ್ದಿ ಓದಿ.

0
189

ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪುನೀತ್ ರಾಜ್ಕುಮಾರ್ ಅಭಿನಯದ ಯುವ ರತ್ನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಈ ಚಿತ್ರದ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದ್ದು ಅಲ್ಲಿನ ಯುವರಾಜ ಕಾಲೇಜಿನಲ್ಲಿ ನಿನ್ನೆ ಚಿತ್ರೀಕರಣ ನಡೆಯುತ್ತಿತ್ತು. ಇನ್ನು ಇದೇ ವೇಳೆ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಜೈಕಾರ ಕೂಗುತ್ತಾ ಕಾಯುತ್ತಿದ್ದರು. ಈ ಸಮಯದಲ್ಲಿ ಕೆಲ ದರ್ಶನ್ ಅಭಿಮಾನಿಗಳು “ಜೈ ಡಿ ಬಾಸ್” ಎಂದು ಘೋಷಣೆಯನ್ನು ಗುಂಪಿನ ಮಧ್ಯೆ ಕೂಗಿದ್ದಾರೆ.


ಈ ವಿಷಯಕ್ಕಾಗಿಯೇ ದರ್ಶನ್ ಅಭಿಮಾನಿಗಳ ಗುಂಪು ಮತ್ತು ಪುನೀತ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಹಾಗೂ ಆ ಗುಂಪಿನ ಯುವಕರು ಮಾಡುತ್ತಿರುವ ಆರೋಪದ ಪ್ರಕಾರ ಪುನೀತ್ ರಾಜ್ಕುಮಾರ್ ಅವರ ಬೌನ್ಸರ್ ಗಳು ಅವರ ಮೇಲೆ ಕೈ ಮಾಡಿದ್ದಾರಂತೆ. ಹೌದು ಇದೀಗ ಈ ವಿಷಯ ದೊಡ್ಡ ಮಟ್ಟಕ್ಕೆ ತಿರುಗಿದ್ದು ವಿದ್ಯಾರ್ಥಿಗಳ ಗುಂಪು ನ್ಯಾಯ ಬೇಕು ಎಂದು ಧರಣಿಯನ್ನು ಸಹ ನಡೆಸಿದೆ. ಇನ್ನು ಕೆಲ ಜನ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿದರೆ, ಮತ್ತಷ್ಟು ಜನ ಇನ್ನೊಬ್ಬ ಸ್ಟಾರ್ ನಟನ ಚಿತ್ರ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ಮತ್ತೊಬ್ಬ ಸ್ಟಾರ್ ನಟನಿಗೆ ಜೈಕಾರ ಹಾಕಿದ್ದು ತಪ್ಪು ಇದರಿಂದಲೇ ಇಷ್ಟೆಲ್ಲ ಆಗಿದ್ದು ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here