No menu items!
9.3 C
Munich
Wednesday, April 29, 2026

ಯಾವುದೇ ಹೇಳಿಕೆ ಕೊಡದಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ !

Must read

ಮಾಧ್ಯಮದವರೊಡನೆ ಮಾತನಾಡಿದ ತಿಪ್ಪರೆಡ್ಡಿ ಅವರು ಸಂಪುಟ ವಿಸ್ತರಣೆಯಲ್ಲಿ ಅವಕಾಶ ಮಿಸ್ ಆದ ಹಿನ್ನೆಲೆ ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು ಹಾಗು ಹಳಬರನ್ನ ಕೈಬಿಟ್ಟು ಹೊರಬರಿಗೆ ಅವಕಾಶ ನೀಡಬೇಕು ಆಗ ಮುಂದೆ ೧೫೦ ಸೀಟು ಬರೋಕೆ ಸಾಧ್ಯ ಆಗತ್ತೆ ಯಾರು ಈಗಾಗಲೇ ಪದೇ ಪದೇ ಸಚಿವರಾಗಿದ್ದಾರೆ ಅಂತವರನ್ನ ಬಿಟ್ಟು ಹೊರಬರಿಗೆ ಅವಕಾಶ ಕೊಡಲಿ,ಆಗ ಸರ್ಕಾರವೂ ಉತ್ತಮವಾಗಿ ನಡೆಯುತ್ತೆ ಎಂದು ಸಂಪುಟ ಪುನಾರಚನೆಗೆ ಶಾಸಕ ತಿಪ್ಪಾರೆಡ್ಡಿ ಆಗ್ರಹ ಮಾಡಿದ್ದಾರೆ.

ಈಗ ಸಂಪುಟ ವಿಸ್ತರಣೆ ಆಗಿಹೋಗಿದೆ ನಾನು ೬೧ ರಿಂದ ರಾಜಕೀಯಕ್ಕೆ ಬಂದವನು ನಾನು ಆರು ಬಾರಿ ಶಾಸಕನಾದವನು
ನಾನು ಸಿಎಂ,ವರಿಷ್ಠರಿಗೆ ಅವಕಾಶ ಕೇಳಿದ್ದೆ ನಾನು ಅನುಭವಿ ಆಗಿರೋದ್ರಿಂದ ಇದೆಲ್ಲಾ ಸಹಜ ಅಯ್ತು ಆದರೆ ನನಗೆ ಅವಕಾಶ ಸಿಗಲಿಲ್ಲ ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ತಿಪ್ಪಾರೆಡ್ಡಿ ಹೇಳಿಕೆ. ಹಾಗು ಚಿತ್ರದುರ್ಗ ಉಸ್ತುವಾರಿ ಸಚಿವರ ವಿರುದ್ಧ ರೆಡ್ಡಿ ಆಕ್ರೋಶ ನಾನು ಕೇಳೋದು ಇಷ್ಟೇ ಚಿತ್ರದುರ್ಗ ಹಿಂದುಳಿದ ಜಿಲ್ಲೆ
೨೦/೨೦ ಸರ್ಕಾರ ಬಂತು,೨೦೦೮ ರಲ್ಲಿ ಬಂತು ಆದರು ನಮ್ಮ ಜಿಲ್ಲೆಗೆ ಉಸ್ತುವಾರಿ ಬೇರೆ ಜಿಲ್ಲೆಯವರೇ ಇದ್ದಾರೆ ಇದ್ರಿಂದ ನಮ್ಮ ಜಿಲ್ಲೆ ಬೆಳವಣಿಗೆ ಕುಂಠಿತವಾಗಿದೆ ಹೊರಗಿನಿಂದ ಬಂದವರು ಸರ್ಕಾರಿ ಕಾರ್ಯಕ್ರಮ ಅಷ್ಟೇ ಅಟೆಂಡ್ ಮಾಡ್ತಾರೆ ಬೇರೆ ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸ್ತಿಲ್ಲ ಅವರಿಗೆ ಬಳ್ಳಾರಿ ಬಗ್ಗೆ ಆಸಕ್ತಿಯಿದೆ
ಅವರು ನಮ್ಮ ಉತ್ತಮ ಸ್ಮೇಹಿತರೇ ಆದರೆ ಅವರು ಬಳ್ಳಾರಿ ಕಡೆ ಆಸಕ್ತಿ ಹೊಂದಿದ್ದಾರೆ,

ಉಸ್ತುವಾರಿ ಸಚಿವ ಶ್ರೀರಾಮುಲು ವಿರುದ್ಧ ತಿಪ್ಪಾರೆಡ್ಡಿ ಅಸಮಾಧಾನ ಹೊರಹಕಿದ್ದಾರೆ.ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಕೋರ್ ಕಮಿಟಿಯಲ್ಲಿ ಭೇಟಿ ಮಾಡಿ ಮಾತನಾಡಿದ್ದಾರೆ ಯಾವುದೇ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ, ಹಾಗಾಗಿ ನಾವು ಏನೂ ಮಾತನಾಡುವಂತಿಲ್ಲ
ಪಕ್ಷದ ಆದೇಶ ಮೀರಿ ಕೆಲಸ ಮಾಡುವವನಲ್ಲ ಎಂದು ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article