No menu items!
11.1 C
Munich
Wednesday, April 29, 2026

ರೈತರ ಪ್ರತಿಭಟನೆಯಲ್ಲಿ ಬಿತ್ತು ಹೆಣ

Must read

ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಜೀವ ಬಲಿಯಾಗಿದೆ. ದಿಲ್ಲಿ ಹೃದಯ ಭಾಗದಲ್ಲೇ ಇರುವ ಐಟಿಒ (ಆದಾಯ ತೆರಿಗೆ ಕಚೇರಿ) ಮೆಟ್ರೋ ನಿಲ್ಧಾಣದ ಬಳಿಯಲ್ಲೇ ಇರುವ ಡಿಡಿಯು ಮಾರ್ಗದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ರೈತ ಸಾವನ್ನಪ್ಪಿದ್ದಾನೆ.
ರಸ್ತೆ ಪಕ್ಕದಲ್ಲಿ ರೈತನ ಮೃತದೇಹ ಪತ್ತೆಯಾಗಿದೆ. ಕೆಲವರು ರೈತನಿಗೆ ಗುಂಡೇಟು ತಗುಲಿದೆ ಎಂದು ವಾದಿಸಿದರೆ, ಮತ್ತೆ ಕೆಲವರು ಟ್ರ್ಯಾಕ್ಟರ್‌ ಗುದ್ದಿದ ಕಾರಣ ಈತ ಸಾವನ್ನಪ್ಪಿದ್ದಾನೆ ಎಂದು ವಾದಿಸುತ್ತಿದ್ಧಾರೆ. ರೈತ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಐಟಿಒ ಬಳಿಯಲ್ಲೇ ಇರುವ ಪೊಲೀಸ್ ಪ್ರಧಾನ ಕಚೇರಿ ಬಳಿ ರೈತರು ಆಕ್ರೋಶಿತರಾಗಿ ಪ್ರತಿಭಟನೆ ಆರಂಭಿಸಿದ್ದಾರೆ.
ರೈತರ ಆಕ್ರೋಶಕ್ಕೆ ಪೊಲೀಸ್ ವಾಹನಗಳು ಜಖಂಗೊಂಡಿವೆ. ರಿಸರ್ವ್ ಪೊಲೀಸರ ಬಸ್‌ಗಳು, ಪ್ಯಾಟ್ರೋಲಿಂಗ್ ಕಾರುಗಳು ಸೇರಿದಂತೆ ಹಲವು ವಾಹನಗಳನ್ನು ಪ್ರತಿಭಟನಾಕಾರರು ಜಖಂಗೊಳಿಸಿದ್ದಾರೆ.
ಮೃತ ರೈತ ಟ್ರ್ಯಾಕ್ಟರ್ ಹಾಗೂ ಬ್ಯಾರಿಕೇಡ್‌ ನಡುವೆ ಸಿಲುಕಿ ಸತ್ತನೋ ಅಥವಾ ಗುಂಡೇಟಿನಿಂದ ಮೃತಪಟ್ಟನೋ ಅನ್ನೋದು ಇನ್ನೂ ದೃಢಪಟ್ಟಿಲ್ಲ. ಈ ನಡುವೆ, ಐಟಿಒ ಬಳಿ ಸಂಭವಿಸಿದ ಘರ್ಷಣೆಯಲ್ಲಿ ಹಲವು ಪೊಲೀಸರಿಗೂ ಗಾಯಗಳಾಗಿವೆ.
ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ನಡೆಸಿ, ಅಶ್ರುವಾಯು ಸಿಡಿಸಿ ಈ ವೇಳೆ ಚೆದುರಿಸಲಾಗಿತ್ತು. ಪರಿಸ್ಥಿತಿ ಇದೀಗ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದ್ದು, ಮೃತ ರೈತನ ಪೂರ್ವಾಪರವನ್ನು ಅರಿಯುವ ಪ್ರಯತ್ನಗಳು ನಡೆಯುತ್ತಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article