No menu items!
10.3 C
Munich
Saturday, September 12, 2026

ವರ್ಷದ ತೊಡಕು ರಾತ್ರಿಯೇ ಡೆಡ್ಲಿ ಅಟ್ಯಾಕ್: ಹಳೆ ದ್ವೇಷಕ್ಕೆ ವ್ಯಕ್ತಿಗೆ ಚಾಕು ಇರಿದ ಕಿಡಿಗೇಡಿಗಳು!

Must read

ಆನೇಕಲ್:- ವರ್ಷದ ತೊಡಕು ರಾತ್ರಿ ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ. ರಾಜಧಾನಿ ಬೆಂಗಳೂರಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಸಂದ್ರದಲ್ಲಿ ನಿನ್ನೆ ರಾತ್ರಿ 10:30 ರ ಸುಮಾರಿಗೆ ಘಟನೆ ಜರುಗಿದೆ

ಮುತ್ತಾನಲ್ಲೂರು ವಾಸಿ ಸತೀಶ್(30) ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ. ಮುತ್ತಾನಲ್ಲೂರು ವಾಸಿಗಳಾದ ಮುನಿಯಲ್ಲಪ್ಪ, ದರ್ಶನ್ ಪ್ರಶಾಂತ್, ಆನಂದ್ , ಅಶೋಕ್ ಮತ್ತು ವೈಟ್ ಫೀಲ್ಡ್ ಮೂರ್ತಿ ಅಂಡ್ ಗ್ಯಾಂಗ್ ನಿಂದ ಕೃತ್ಯ ನಡೆದಿದೆ. ನಿನ್ನೆ ಮಧ್ಯಾಹ್ನ ಸತೀಶ್ ಜೊತೆ ಮುನಿಯಲ್ಲಪ್ಪ ಕಿರಿಕ್ ತೆಗೆದಿದ್ದ. ಸಂಜೆ ಹೊತ್ತಿಗೆ ಅಗಿದ್ದು ಆಗೋಯ್ತು ರಾಜಿಗೆ ಬಾ ಎಂದು ಕರೆದಿದ್ದಾನೆ.

ರಾತ್ರಿ ಮಾತನಾಡಬೇಕು ಅಂತಾ ಕರೆಸಿ ಸತೀಶ್ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ತಲೆ, ಕಣ್ಣು, ಹೊಟ್ಟೆ, ಬೆನ್ನು, ಕೈ ಹತ್ತಾರು ಡ್ರಾಗರ್ ಮತ್ತು ಚಾಕುವಿನಿಂದ ಇರಿಯಲಾಗಿದ್ದು, ಜೊತೆಯಲ್ಲಿದ್ದ ಸತೀಶ್ ಮಗನ ಮೇಲೂ ಹಲ್ಲೆ ನಡೆದಿದೆ.

ರಾತ್ರಿ ಬೇಡವೆಂದರೂ ಒತ್ತಾಯ ಮಾಡಿ ಸತೀಶ್ ನನ್ನು ಮುನಿಯಲ್ಲಪ್ಪ ಕರೆದೊಯ್ದಿದ್ದ. ಆತಂಕಗೊಂಡ ಮನೆಯವರು ಮಗನನ್ನು ಸತೀಶ್ ಜೊತೆ ಕಳುಹಿಸಿದ್ದರು. ಪ್ಲಾನ್ ನಂತೆ ಸತೀಶ್ ಗಾಗಿ ಗ್ಯಾಂಗ್ನಿಂದ ಅಟ್ಯಾಕ್ ಗಾಗಿ ಕುಳಿತಿತ್ತು. ಈ ವೇಳೆ ಸತೀಶ್ ನೆರವಿಗೆ ಧಾವಿಸಿದ ಮಗನ ಹೊಡೆದು
ಗ್ಯಾಂಗ್ ಓಡಿಸಿದೆ. ಬಳಿಕ ಸತೀಶ್ ಮೇಲೆ ಡ್ರಾಗರ್ ಮತ್ತು ಚಾಕುವಿನಿಂದ ಸಿಕ್ಕಸಿಕ್ಕಲ್ಲಿ ಗ್ಯಾಂಗ್ ಚುಚ್ಚಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸತೀಶ್ ಜೀವನ್ಮರದ ನಡುವೆ ಹೋರಾಟ ಮಾಡುತ್ತಿದ್ದು, ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article