No menu items!
11.1 C
Munich
Wednesday, April 29, 2026

ಸಿಡಿ ಸಂತ್ರಸ್ತೆ ಪ್ರಧಾನಿಯಿಂದ ರಕ್ಷಣೆ ಪಡೆಯಲಿ!

Must read

ಸಿಡಿ ಪ್ರಕರಣದ ಹೆಣ್ಣು ಮಗಳಿಗೆ ರಾಜ್ಯ ಸರಕಾರದ ಮೇಲೆ ರಕ್ಷಣೆಯ ವಿಷಯದಲ್ಲಿ ನಂಬಿಕೆ ಇಲ್ಲದೇ ಇದ್ದರೆ ದೇಶದ ಪ್ರಧಾನಿಗಳಿಗೆ ಸಂದೇಶ ಕಳುಹಿಸಿ ರಕ್ಷಣೆ ಪಡೆದುಕೊಳ್ಳಬಹುದು. ಇಂತಹ ಪ್ರಧಾನಿಗಳನ್ನು ನಾವು ಎಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ. ಅವರ ನೆರವು ಪಡೆದು, ಸಮಸ್ಯೆಯನ್ನು ತಿಳಿಗೊಳಿಸಿಕೊಳ್ಳಬಹುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.

ಬಸವಕಲ್ಯಾಣದಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲೋ ಗುಪ್ತ ಸ್ಥಳದಿಂದ ಯಾರದ್ದೋ ಬಲವಂತದಿಂದ ಹೇಳಿಕೆ ನೀಡುವ ಬದಲು ಮುಖ್ಯ ನ್ಯಾಯಾಧೀಶರನ್ನು ಬೇಕಾದರೆ ಭೇಟಿಯಾಗಿ ರಕ್ಷಣೆ ಪಡೆದುಕೊಳ್ಳಬಹುದು. ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರ ಮೇಲೆ ನಂಬಿಕೆ ಇದ್ದರೆ ಅವರ ಬಳಿ ಹೋಗಲಿ ಎಂದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಇಂತಹ ಸಮಸ್ಯೆಗಳ ನಡುವೆ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಅದು ಬಿಟ್ಟು ಸಿಡಿಗೆ ಪ್ರಾಶಸ್ತ್ಯ ನೀಡಲು ಆ ಹೆಣ್ಣು ಮಗಳು ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.

ಸಿಡಿ ವಿಷಯದಲ್ಲಿ ನನಗೆ ಆಸಕ್ತಿ ಇಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಿಟ್ಟಿದ್ದೇನೆ. ಜನರ ಸಮಸ್ಯೆಗೆ ಸ್ಪಂದಿಸದೇ, ಇಂತಹ ಕೆಟ್ಟ ರೀತಿಯ ವಾತಾವರಣ ನಿರ್ಮಾಣ ಮಾಡಲಾಗಿದೆ. ಬಿಜೆಪಿ, ಕಾಂಗ್ರೆಸ್‌ನವರಿಗೆ ಏನಾದರೂ ಜನರ ಬಗ್ಗೆ ಕಳಕಳಿ ಇದೆಯೇ ಎಂದು ಕೇಳಿದರು.

ರಾಜ್ಯ ಸರಕಾರ ಆ ಹೆಣ್ಣು ಮಗಳಿಗೆ ಹಾಗೂ ಆಕೆಯ ಕುಟುಂಬದವರಿಗೆ ರಕ್ಷಣೆ ನೀಡಬೇಕು. ಹೆಣ್ಣು ಮಗಳು ಯಾರದ್ದೋ ಚಿತಾವಣೆಗೆ ಬಲಿಯಾಗಿ ಎಲ್ಲೋ ಒಂದು ಕಡೆ ಇದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿರಬಹುದು. ಆಕೆಯನ್ನು ಯಾರು ಮುಚ್ಚಿಟ್ಟುಕೊಂಡಿದ್ದಾರೋ ಗೊತ್ತಿಲ್ಲ ಎಂದರು.

ಜಾರಕಿಹೊಳಿ ಬಳಿ ಸಾಕ್ಷಿ ಇದೆಯಂತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಚ್ಡಿಕೆ, ಯಾರ ಹತ್ರ ಸಾಕ್ಷಿ ಇದೆಯೋ, ಯಾರು ಸಾಕ್ಷಿ ಸೃಷ್ಟಿ ಮಾಡುತ್ತಿದ್ದಾರೋ ಎಲ್ಲವೂ ನನಗೆ ಅಪ್ರಸ್ತುತ ಎಂದರು. ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಜನರ ಸಮಸ್ಯೆ ಕಡೆ ನಮ್ಮ ಗಮನ ಇರಬೇಕು. ಕ್ಷುಲ್ಲಕ ವಿಷಯದತ್ತ ಗಮನಹರಿಸುವುದು ಬೇಡ. ಜನರ ಬಾಳಿನೊಂದಿಗೆ ಚೆಲ್ಲಾಟ ಆಡಬಾರದು ಎಂದು ತಿಳಿಸಿದರು.

ಸಚಿವ ಡಾ. ಸುಧಾಕರ್ ಹೇಳಿಕೆ, ಅತ್ಯಂತ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಮಟ್ಟದ ಹೇಳಿಕೆ ನೀಡಿರುವುದು ಬಿಜೆಪಿಯ ನಡವಳಿಕೆ ಏನು ಎಂಬುದನ್ನು ತೋರಿಸಿದೆ ಎಂದು ಎಚ್.ಡಿ.ಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ನಡವಳಿಕೆಯಿಂದ ರಾಜ್ಯದ ರಾಜಕಾರಣವನ್ನೇ ನಗೆಪಾಟಲಿಗೀಡು ಮಾಡಲಾಗಿದೆ. ಎಸ್ಐಟಿ ರಾಜ್ಯ ಸರಕಾರದ ಸಂಸ್ಥೆ. ಎಸ್ಐಟಿ ಅನ್ನು ಹಿಂದೆ ಸಿದ್ದರಾಮಯ್ಯನವರು ಹಾಗೂ ಈಗಿನ ರಾಜ್ಯ ಸರಕಾರ ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಜಗಜ್ಜಾಹೀರು. ಸಿಡಿ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ವೈಭವೀಕರಿಸದೇ, ಕೊಳಚೆಯಲ್ಲಿ ಬಿದ್ದಿರುವುದನ್ನು ಸರಿಪಡಿಸಿಕೊಳ್ಳಬೇಕು.”

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article