ಸುತ್ತೂರು ಮಠಕ್ಕೆ ದಸರಾ ಉದ್ಘಾಟಕ ಹಂಸಲೇಖ ಭೇಟಿ

0
2084

ಮೈಸೂರು: ಮೈಸೂರು ದಸರಾ ಉದ್ಘಾಟಕರಾದ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಹಂಸಲೇಖ ಅವರಿಗೆ ಪೂರ್ಣಕುಂಭ,ವಾದ್ಯಗೋಷ್ಠಿ ಮೂಲಕ ಸ್ವಾಗತ ಕೋರಲಾಯಿತು.
ಮೈಸೂರು ಜಿಲ್ಲಾಡಳಿತ ವತಿಯಿಂದಲೂ ಹಂಸಲೇಖರಿಗೆ ಸ್ವಾಗತ ಕೋರಲಾಯಿತು. ತಹಸೀಲ್ದಾರ್ ರಕ್ಷಿತ್ ಅವರು ಹಂಸಲೇಖರನ್ನ ಸ್ವಾಗತಿಸಿದರು. ನಂತರ ಹಂಸಲೇಖ ಅವರು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಸುತ್ತೂರು ಶ್ರೀಗಳು ದಸರಾ ಉದ್ಘಾಟಕ ಹಂಸಲೇಖರನ್ನ ಸನ್ಮಾನಿಸಿದರು.