ಧೋನಿ ಮೇಲೆ ಸಿಟ್ಟಾಗಿದ್ರಂತೆ ದ್ರಾವಿಡ್

Date:

ನವದೆಹಲಿ: ರಾಹುಲ್ ದ್ರಾವಿಡ್​ ಕೋಪಿಷ್ಠರಲ್ಲ ಎನ್ನುವುದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ಆದರೆ 2006ರಲ್ಲಿ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ ಮೇಲೆ ರಾಹುಲ್ ಉಗ್ರರೂಪ ತಾಳಿದ್ದ ಸ್ವಾರಸ್ಯಕರ ಘಟನೆಯನ್ನು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಸೆಹ್ವಾಗ್​ ನೆನೆದಿದ್ದಾರೆ.

ಎರಡು ದಿನಗಳ ಹಿಂದೆ ವಾಣಿಜ್ಯ ಜಾಹೀರಾತಿನಲ್ಲಿ ಕೋಪದಿಂದ ವರ್ತಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಕಿಚ್ಚೆಬ್ಬಿಸಿತ್ತು. ಇದಕ್ಕೆ ಕೊಹ್ಲಿ ಸೇರಿದಂತೆ ಹಲವಾರು ಹಾಲಿ-ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ರಾಹುಲ್​ ದ್ರಾವಿಡ್​ ಈ ಹಿಂದೆ ಆ ರೀತಿ ಕೋಪದಿಂದ ವರ್ತಿಸಿದ್ದ ಬಗ್ಗೆ ಸೆಹ್ವಾಗ್ ಹೇಳಿಕೊಂಡಿದ್ದಾರೆ.

2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ದ್ರಾವಿಡ್​ ಆಗಷ್ಟೇ ಭಾರತ ತಂಡ ಸೇರಿದ್ದ ಯುವ ವಿಕೆಟ್​ ಕೀಪರ್ ಧೋನಿ ವಿರುದ್ಧ ಒಮ್ಮೆ ತಮ್ಮ ವಿರುದ್ಧವೂ ಕೋಪಗೊಂಡಿದ್ದರು ಎಂದು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.

“ನಾನು ರಾಹುಲ್ ದ್ರಾವಿಡ್​ ಕೋಪಗೊಂಡಿದ್ದನ್ನು ನೋಡಿದ್ದೇನೆ. ನಾವು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಧೋನಿ ಹೊಸಬರಾಗಿದ್ದರು. ಪಂದ್ಯವೊಂದರಲ್ಲಿ ಧೋನಿ ಶಾಟ್​ ಮಾಡಲು ಹೋಗಿ ಪಾಯಿಂಟ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ದರು. ಅದಕ್ಕೆ ಕೋಪಗೊಂಡ ದ್ರಾವಿಡ್, ನೀವು ಆಡುವ ರೀತಿ ಅದು? ನೀವು ಪಂದ್ಯವನ್ನು ಫಿನಿಶ್ ಮಾಡಬೇಕು” ಎಂದು ಕೋಪದಿಂದ ಹೇಳಿದ್ದರು.

ಇನ್ನು ಧೋನಿ ಮೇಲಷ್ಟೆ ಅಲ್ಲದೆ, ನನ್ನ ಮೇಲೂ ಒಂದು ಬಾರಿ ಕೋಪಗೊಂಡು ಇಂಗ್ಲಿಷ್​ನಲ್ಲಿ ಬೈಯ್ದಿದ್ದರು. ಆದರೆ ನನಗೆ ಅದರಲ್ಲಿ ಅರ್ಧದಷ್ಟು ಅರ್ಥವಾಗಿರಲಿಲ್ಲ ಎಂದು ಸ್ವಾರಸ್ಯಕರ ಸಂಗತಿಯನ್ನು ಡೆಲ್ಲಿ ಡ್ಯಾಶರ್ ಬಿಚ್ಚಿಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...