ರೋಗಿಗಳ ಪಾಲಿನ ದೇವರು 5 ರೂಪಾಯಿ ಡಾಕ್ಟರ್…!

Date:

ಖಾಸಗಿ ವೈದ್ಯರು ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೀತಿದೆ. ಖಾಸಗಿ ವೈದ್ಯರ ಪ್ರತಿಭಟನೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ..! ಸೂಕ್ತ ಚಿಕಿತ್ಸೆ ಸಿಗದೆ ಅನೇಕ ಸಾವುಗಳು ಸಂಭವಿಸಿವೆ. ಈ ನಡುವೆ ಯಾರ್ ಏನೇ ಮಾಡಿಕೊಳ್ಳಲಿ, ನಾನು ಮಾತ್ರ ನನ್ನ ಕೈಲಾದ ಮಟ್ಟಿಗೆ ರೋಗಿಗಳಿಗೆ ಚಿಕಿತ್ಸೆ ನೀಡ್ತೀನಿ ಅಂತ ಬಡ ರೋಗಿಗಳ ಪಾಲಿಗೆ ದೇವರಾಗಿದ್ದಾರೆ ಮಂಡ್ಯದ ಡಾ. ಶಂಕರೇಗೌಡ.


ಹೌದು 5 ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧರಾಗಿರೋ ಶಂಕರೇಗೌಡ ಅವರು ಮಂಡ್ಯದ ಸುಭಾಷ್ ನಗರದಲ್ಲಿ ತಾರಾ ಕ್ಲೀನಿಕ್ ನಡೆಸ್ತಿದ್ದಾರೆ. ಚರ್ಮ, ಕುಷ್ಠ ಮತ್ತು ಲೈಂಗಿಕ ರೋಗ ತಜ್ಞರಾಗಿರುವ ಇವರು ಅನೇಕ ವರ್ಷಗಳಿಂದ ಸೇವಾ ಶುಲ್ಕವನ್ನು 5 ರೂಪಾಯಿಗಿಂತ ಹೆಚ್ಚಿಸಿಲ್ಲ..! ಈಗ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ನನಗೂ ಅದಕ್ಕು ಸಂಬಂಧವಿಲ್ಲ, ನಾನು ನನ್ನ ನಂಬಿ ಬರೋ ರೋಗಿಗಳಿಗೆ ಚಿಕಿತ್ಸೆ ನೀಡಿಯೇ ಸಿದ್ಧ ಅಂತ ಸೇವೆಯಲ್ಲಿ ತೊಡಗಿದ್ದಾರೆ.


ಇವರು ಪ್ರತಿದಿನ ಮಂಡ್ಯದ ತಮ್ಮ ಕ್ಲೀನಿಕ್ ಗೆ ಬರುವ ಮೊದಲು ತನ್ನೂರು ಶಿವಳ್ಳಿಯ ಸರ್ಕಲ್‍ನಲ್ಲಿ ಜಗಲಿ ಮೇಲೆ ಕೂತ್ಕೊಂಡು ಚಿಕಿತ್ಸೆ ನೀಡ್ತಾರೆ.
ಸರ್ಕಾರ, ಖಾಸಗಿ ವೈದ್ಯರ ನಡುವಿನ ಪ್ರತಿಷ್ಠೆಯ ನಡುವೆ ಸೇವೆಯೇ ದೊಡ್ಡದು, ರೋಗಿಗಳ ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಸೇವೆ ಮಾಡ್ತಿರೋ ಇವರು ನಿಜಕ್ಕೂ ಗ್ರೇಟ್.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...