ದೇವೇಗೌಡರನ್ನ ಮಣಿಸಲು ಬಿಜೆಪಿ ಮಾಸ್ಟರ್ ಪ್ಮಾನ್..! ಗೌಡರ ವಿರುದ್ಧ ಈ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದ್ಯಂತೆ..
ಸದ್ಯ ಲೋಕಸಭಾ ಚುನಾವಣೆ ಮೇಲೆ ಎಲ್ಲ ಪಕ್ಷಗಳು ತಮ್ಮ ಗಮನವನ್ನ ಹರಿಸಿದೆ.. ಈ ಮೂಲಕ ಮುಂಬರಲಿರುವ ಚುನಾವಣೆಯ ಕಾವು ಹೆಚ್ಚಾಗುತ್ತಿದೆ.. ಈ ನಡುವೆ ಕರ್ನಾಟಕದಲ್ಲೂ ಈಗಾಗ್ಲೇ ಚುನಾವಣ ಕಣಗಳು ರಂಗೇರುತ್ತಿದ್ದು, ಸ್ಪರ್ಧಿಗಳು ಹಾಗೆ ಪ್ರತಿಸ್ಪರ್ಧಿಗಳ ತಯಾರಿ ಜೋರಾಗೆ ಇದೆ.. ಇನ್ನೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲು ಬಿಟ್ಟುಕೊಡದ ಜೆಡಿಎಸ್ ವಿರುದ್ದ ಬಿಜೆಪಿ ಮಾಸ್ಟರ್ ಪ್ಲಾನ್ ಸಿದ್ದ ಮಾಡುತ್ತಿದೆ..
ಕೇಂದ್ರದಲ್ಲಿ ಬಿಜೆಪಿ ವಿರುದ್ಧ ತೃತೀಯ ರಂಗಗಳು ಒಟ್ಟಾಗಿದ್ದು, ಇದರ ಸಾರಥ್ಯವನ್ನ ಜೆಡಿಎಸ್ ವರಿಷ್ಠರಾದ ದೇವೇಗೌಡ ಅವರು ವಹಿಸಿಕೊಂಡಿದ್ದಾರೆ.. ಹೀಗಾಗೆ ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ವಿರುದ್ದ ಪ್ರಬಲ ಪ್ರತಿಸ್ಪರ್ಧಿಯನ್ನ ಕಣಕ್ಕಿಳಿಸಿ ಅವರನ್ನ ಸೋಲಿಸುವ ತಂತ್ರವನ್ನ ಹೆಣೆಯುತ್ತಿದೆ ಅಂತ ಹೇಳಲಾಗ್ತಿದೆ..
ಈಗಾಗ್ಲೇ ಹಾಸನದಲ್ಲಿ ಕೆಳಮಟ್ಟದಿಂದ ಬಿಜೆಪಿ ಕಾರ್ಯಕರ್ತರನ್ನ ಹುರಿದುಂಬಿಸುವ ಕಾರ್ಯ ನಡೆಯುತ್ತಿದೆಯಂತೆ.. ಇನ್ನೂ ಹಾಸನದಲ್ಲಿ ಸಿ.ಟಿ ರವಿ ಅವರನ್ನ ದೇವೇಗೌಡರ ವಿರುದ್ದ ಕಣಕ್ಕಿಳಿಸಲು ಬಿಜೆಪಿ ಸಿದ್ದವಾಗಿದೆ ಅನ್ನೋ ಮಾತುಗಳು ಈಗ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.