ರಮ್ಯಾ ನಡೆ ಬಗ್ಗೆ ಈ ಎಲ್ಲೆಡೆ ಚರ್ಚೆಯಾಗುತ್ತಿದೆ.. ಯಾಕೆ ಹೀಗೆ ಮಾಡುತ್ತಿದ್ದಾರೆ ಈ ಮೋಹಕ ತಾರೆ ಅನ್ನೋ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.. ಹೇಳಿಕೇಳಿ ಮಂಡ್ಯ ಸೇರಿದಂತೆ ರೆಬಲ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಟಿ-ಮಾಜಿ ಸಂಸದೆ, ಈಗ ಇದ್ದಕ್ಕೆ ಇದ್ದಹಾಗೆ ರಾತ್ರೋರಾತ್ರಿ ಮನೆ ಖಾಲಿ ಮಾಡುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ..ಕಳೆದ ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲೇ ಇದ್ದು ಪ್ರಚಾರ ಕಾರ್ಯ ನಡೆಸಲು ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ರು.. ನಿನ್ನೆ ತಡ ರಾತ್ರಿ ಎರಡು ಲಾರಿಗಳಲ್ಲಿ ಮನೆಯ ಸಾಮಾಗ್ರಿಗಳನ್ನ ಖಾಲಿ ಮಾಡಿಬಿಟ್ಟಿದ್ದಾರೆ.. ಹೀಗೆ ಧಿಡೀರನೆ ಮನೆ ಖಾಲಿ ಮಾಡಿರುವುದು ತೀರ್ವ ಚರ್ಚೆಗೆ ಕಾರಣವಾಗಿದೆ.. ಎರಡನೆ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ರಮ್ಯಾ ಸೋಲು ಕಂಡಿದ್ರು.. ಆಗ ನನ್ನ ಸೋಲಿಗೆ ಅಂಬಿ ಅವರ ಬೆಂಬಲ ಸಿಗದಿದದ್ದೆ ಕಾರಣ ಅಂತ ಹೇಳಿಕೊಂಡಿದ್ರು… ಆನಂತರ ಈ ಇಬ್ಬರ ನಡುವೆ ಅಂತ ಮೂಡಿತ್ತು…
ಇದೆಲ್ಲವನ್ನು ಪಕ್ಕಕ್ಕಿಟ್ಟು ರಮ್ಯಾ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಲ್ಲಿದ್ದಾರೆ ಎಂದುಕೊಂಡ್ರು.. ಸಂತಾಪ ಕೇವಲ ಟ್ವೀಟ್ ನಲ್ಲೆ ಮುಗಿದು ಹೋಯಿತು.. ಈ ಎಲ್ಲದರಿಂದ ಕೋಪಗೊಂಡಿದ್ದ ಅಭಿಮಾನಿಗಳು ರಮ್ಯಾ ವಿರುದ್ದ ಆಕ್ರೋಶವನ್ನ ವ್ಯಕ್ತ ಪಡೆಸಿದ್ರು..
ರಾತ್ರೋ ರಾತ್ರಿ ಮಂಡ್ಯದಲ್ಲಿ ಮನೆ ಖಾಲಿ ಮಾಡಿದ ರಮ್ಯಾ..! ಅಭಿಮಾನಿಗಳ ಆಕ್ರೋಶಕ್ಕೆ ಮಣಿದುಬಿಟ್ರಾ ಮೋಹಕ ನಟಿ..!!?
Date: