ವೀಕ್ಎಂಡ್ ನಲ್ಲಿ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೊಟ್ರೋ ಸಂಚಾರ ಸ್ಥಗತಿ..!!
ಟ್ರಿನಿಟ್ ಸರ್ಕಲ್ ನ ಬಳಿ ಮೆಟ್ರೋ ಪಿಲ್ಲರ್ ಬಿರುಕು ಬಿಟ್ಟಿರುವ ಬಗ್ಗೆ ಈಗಾಗ್ಲೇ ದೊಡ್ಡ ಮಟ್ಟದ ಸುದ್ದಿಯಾಗಿದೆ.. ಮೆಟ್ರೋ ಪ್ರಯಾಣಿಕರು ಈ ಆತಂಕದಲ್ಲಿ ಸಂಚರಿಸುವಂತಾಗಿದೆ.. ಸದ್ಯ ಬಿರುಕು ಬಿಟ್ಟಿರುವ ಪಿಲ್ಲರ್ ನ ದುರಸ್ಥಿ ಕಾರ್ಯಕ್ಕೆ ತಜ್ಞರ ತಂಡ ಆಗಮಿಸಿದ್ದು, ದೆಹಲಿಯ ಮೆಟ್ರೋ ಯೋಜನೆಯ ಹಿರಿಯ ಎಂಜಿನಿಯರ್ ಗಳು ವಯಾಡಾಕ್ ನಲ್ಲಿರುವ ಬಿರುಕಿಗೆ ಕಾರಣವೇನು ಎಂಬುದನ್ನ ಪರಿಶೀಲನೆ ನಡೆಸಲ್ಲಿದ್ದಾರೆ..
ಅಂದಹಾಗೆ ಈ ದುರಸ್ಥಿ ಕಾರ್ಯ ಮುಂದಿನ 10 ದಿನಗಳ ವರೆಗೆ ನಡೆಯಲಿದೆ ಅಂತ ಹೇಳಲಾಗಿದ್ದು, ವಾರಾಂತ್ಯದಲ್ಲಿ ಈ ಮಾರ್ಗವಾಗಿ ಸಂಚರಿಸಲಿರುವ ಮೆಟ್ರೋವನ್ನ ನಿಲ್ಲಿಸಲಾಗುತ್ತಿದೆ..ಇನ್ನೂ ಈ ಘಟನೆಯಿಂದ ಮೆಟ್ರೋ ಸಂಸ್ಥೆಗೆ ಕೆಟ್ಟ ಹೆಸರು ಬಂದಂತಾಗಿದೆ ಅಂತ ದೆಹಲಿಯ ಮೆಟ್ರೋ ಅಧಿಕಾರಿಗಳು ಸ್ಥಳೀಯ ಮೆಟ್ರೋ ಅಧಿಕಾರಿಗಳಿಗೆ ಹೇಳಿದ್ದಾರೆ.. ಜೊತೆಗೆ ಈ ಘಟನೆಗೆ ಸಂಬಂಧ ಪಟ್ಟಂತೆ, ಮೇಲಾಧಿಕರಿಗಳಿಗೆ ದೂರು ನೀಡಲ್ಲಿದ್ದು, ಸಂಬಂದಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವು ಎಂದು ತಿಳಿಸಿದೆ..