ಮಂಡ್ಯದಲ್ಲಿ ಯಾರ ಪರ ಪ್ರಚಾರ ಮಾಡ್ತೀರಾ ಅಂದಿದ್ದಕ್ಕೆ ಆ್ಯಕ್ಷನ್ ಪ್ರಿನ್ಸ್ ಏನಂದ್ರು?

Date:

ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಪೈಪೋಟಿ ಇರುವುದರಿಂದ ಸ್ಟಾರ್ ವಾರ್​ಗೆ ಮಂಡ್ಯ ಸಜ್ಜಾಗಿದೆ. ಚಾಲೆಂಜಿಂಗ್ ಸ್ಟಾರ್​ ದರ್ಶನ್​, ರಾಕಿಂಗ್ ಸ್ಟಾರ್ ಯಶ್​ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಹಿರಿಯ ನಟ ದೊಡ್ಡಣ್ಣ , ನಿರ್ಮಾಪಕ ರಾಕ್​ ಲೈನ್ ವೆಂಕಟೇಶ್ ಕೂಡ ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.
ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಅವರೂ ಸಿನಿಮಾ ನಟರಾಗಿರುವುದರಿಂದ ಅವರ ಪರ ಯಾರು ಪ್ರಚಾರಕ್ಕೆ ಬರಬಹುದು ಅನ್ನೋ ಕುತೂಹಲವೂ ಇದೆ. ಆದರೆ, ಇಲ್ಲಿವರೆಗೆ ಯಾರೂ ಬಂದಿಲ್ಲ. ನಿಖಿಲ್ ನನಗೆ ಕಾರ್ಯಕರ್ತರೇ ಸೈನಿಕರು ಅಂದಿದ್ದಾರೆ.
ಈ ನಡುವೆ ದರ್ಶನ್, ಯಶ್ ಬಿಟ್ಟು ಉಳಿದ ಸ್ಟಾರ್​ಗಳು ಯಾರ ಪರ ಪ್ರಚಾರ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಹೀಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಈ ಪ್ರಶ್ನೆ ಎದುರಾಗಿತ್ತು. ಆಗ ಅವರು, ಈ ಬಗ್ಗೆ ಮಾತನಾಡೋದು ಬೇಡವೇ ಬೇಡ. ತಾವು ರಾಜಕೀಯದ ಬಗ್ಗೆ ಮಾತಾಡೋಲ್ಲ, ನನಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ನನ್ನ ರಾಜಕಾರಣಕ್ಕೆ ಎಳೀಬೇಡಿ ಎಂದರು. ಮತದಾನದ ಬಗ್ಗೆ ಮಾತ್ರ ಮಾತನಾಡಿ ಪ್ರತಿಯೊಬ್ಬರು ಓಟ್ ಹಾಕಲೇಬೇಕು, ಎಲ್ರೂ ಓಟ್ ಮಾಡಿ ಎಂದಿದ್ದಾರೆ,

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...