ತಾಯಿ ಮಾಡಿದ ತಪ್ಪಿಗೆ ಮಕ್ಕಳು ಇಂದು ಶಿಕ್ಷೆ ಅನುಭವಿಸುತ್ತಿದ್ದಾರೆ. ಅದೂ ಆ ತಾಯಿ ತಪ್ಪು ಮಾಡಿದ್ದು ಇಂದು -ನಿನ್ನೆ ಅಲ್ಲ. 30 ವರ್ಷದ ಹಿಂದೆ.
ತಾಯಿ ಅಂದು ಮಾಡಿರ ಆ ತಪ್ಪಿಗೆ ಇಂದು ಆಕೆಯ ಕುಟುಂಬದ ಮಕ್ಕಳು ಹೆತ್ತ ತಾಯಿಯನ್ನೇ ಮಾತಾಡಿಸುವಂತಿಲ್ಲ. ಅವಳು ಸತ್ತರೂ ಹೋಗುವಂತಿಲ್ಲ. ಯಾವ್ದೇ ಶುಭಸಮಾರಂಭಗಳಿಗೆ ಅವರಿಗೆ ಪ್ರವೇಶ ಇಲ್ಲ.
ಇದು ಚಾಮರಾಜನಗರದ ಕುಟುಂಬವೊಂದರ ಪರಿಸ್ಥಿತಿ. ಅವರ ಕುಟುಂಬಕ್ಕೆ ಹೀಗೆ ಊರವರು ಸಾಮಾಜಿಕ ಬಹಿಷ್ಕಾರ ಹಾಕಲು ಕಾರಣ ತಾಯಿಯ ಆ ತಪ್ಪು.
ಇದು ಪುಟ್ಟಸ್ವಾಮಿ ಎನ್ನುವವರ ಕುಟುಂಬದ ಸ್ಥಿತಿ. ಪುಟ್ಟಸ್ವಾಮಿ ಅವರ ತಾಯಿ 30 ವರ್ಷದ ಹಿಂದೆ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದ್ವೆ ಆಗಿ ಓಡಿ ಹೋಗಿದ್ದರಂತೆ. ಈ ಕಾರಣಕ್ಕೆ ಮಕ್ಕಳೀಗ ಶಿಕ್ಷೆ ಅನುಭವಿಸುತ್ತಿದ್ದಾರೆ.ಆ ಮಹಿಳೆಯ ಹಿರಿಯ ಮಗ ನಾಗೆಂದ್ರ ಕುಟುಂಬದವರು ದಂಡ ಕಟ್ಟಿ ಕುಲ ಸೇರಿಕೊಂಡಿದ್ದಾರೆ. ಪುಟ್ಟಸ್ವಾಮಿ ಕುಟುಂಬಕ್ಕೆ ದಂಡ ಕಟ್ಟಲಾಗದೆ ಬಹಿಷ್ಕಾರದ ಶಿಕ್ಷೆ ಎದುರಿಸಬೇಕಾಗಿದೆ…ಪುಟ್ಟಸ್ವಾಮಿ ಕುಟುಂಬ ಕೂಲಿ ಮಾಡಿ ಬದುಕು ಸವೆಸುತ್ತಿರುವ ಬಡ ಕುಟುಂಬವಾಗಿದೆ.
30 ವರ್ಷದ ಹಿಂದೆ ತಾಯಿ ಅದೆಂಥಾ ತಪ್ಪು ಮಾಡಿದ್ದಕ್ಕೆ ಕುಟುಂಬಕ್ಕೆ ಇಂದು ಇದೆಂಥಾ ಶಿಕ್ಷೆ..!
Date: