ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಿಸ್ಟರ್ ರಾಜೀವ್ ನಾನು ಪ್ರಧಾನಿ ಮೋದಿ ಅವರ ಹಾಗೇ ಚೋರ್ ಅಲ್ಲ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆಗೆ ಬಿರಿಯಾನಿ ತಿಂದಿದ್ದು ಮೋದಿಯವರೇ ಹೊರತು, ನಾನಲ್ಲ ಎಂದು ಕುಟುಕಿದ್ದಾರೆ.
ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, `ಮೇ.4 ಟಿಪ್ಪು ಸುಲ್ತಾನ್ ಕೊನೆಯುಸಿರೆಳೆದ ದಿನ. ಗುಲಾಮಗಿರಿಗೆ ಶರಣಾಗಿ ಬದುಕುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಲೇಸು ಎಂದು ಟಿಪ್ಪು ಸಾವನ್ನಪ್ಪಿದ್ದರು.ಇವರು ನನಗೆ ಸ್ಪೋರ್ತಿ ಎಂದು ಟಿಪ್ಪು ಬಗ್ಗೆ ಟ್ವೀಟ್ ಮಾಡಿದ್ದರು.
ಟಿಪ್ಪು ಕುರಿತ ಇಮ್ರಾನ್ ಖಾನ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ, `ಪ್ರೀತಿಯ ಸಿದ್ದರಾಮಯ್ಯನವರೇ ನವಜೋತ್ ಸಿಂಗ್ ಸಿಧುವಂತೆ ಇಮ್ರಾನ್ ಖಾನ್ ರನ್ನು ಅಪ್ಪಿಕೊಳ್ಳಲು ನಿಮಗಿದು ಸರಿಯಾದ ಸಮಯ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರಿಗೆ ನೀವು ಫೇವರಿಟ್ ಆಗಲು ಸುಲಭ ದಾರಿ ಎಂದಿದ್ದರು.