ಡಿಸ್ಕೋ ಶಾಂತಿ ಪುತ್ರ ತೆರೆಮೇಲೆ..!

Date:

ಒಂದು ಕಾಲದಲ್ಲಿ ಅದ್ಭುತ ನೃತ್ಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಚೆಲುವೆ ಅಂದ್ರೆ ಡಿಸ್ಕೋ ಶಾಂತಿ. ಈಕೆ ತೆರೆ ಮೇಲೆ ಬಂದ್ರೆ ಸಾಕು ಯುವಕರು ಎದೆ ಬಡಿತ ಜೋರಾಗಿ ಬಡಿದುಕೊಳ್ಳುತ್ತೆ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಣಿಯಾಗಿ ಮೆರೆದ ಪ್ರತಿಭಾನ್ವಿತ ನಟಿ ಈಕೆ. ಬಳುಕೋ ಬಳ್ಳಿಯಂತೆ, ಚೆಲುವಿನ ಮೈಮಾಟದ ನೃತ್ಯಗಳ ಮೂಲಕ ನೋದುಗರ ಮೈ ಬಿಸಿಯೇರುವಂತೆ ಮಾಡ್ತಿದ್ದ ಬೆಡಗಿ. ಅಂಜದ ಗಂಡು, ಕುರುಕ್ಷೇತ್ರ, ಸಾಂಗ್ಲಿಯಾನ, ಯುದ್ಧಕಾಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಿಸ್ಕೋ ನೃತ್ಯದ ಮೂಲಕವೇ ಸಿನಿರಸಿಕರ ಮನಗೆದ್ದವರು ಶಾಂತಿ. ಬಳಿಕ ಡಿಸ್ಕೋ ಶಾಂತಿ ಅಂತಾನೇ ಫೇಮಸ್ ಆಗಿದ್ರು. ಅನಂತರ ತೆಲುಗು ರಿಯಲ್ ಸ್ಟಾರ್ ಶ್ರೀಹರಿಯನ್ನು ಮದುವೆಯಾಗೋ ಮೂಲಕ ಡ್ಯಾನ್ಸ್ ಹಾಗೂ ನಟನೆಯಿಂದ ಸ್ವಲ್ಪ ದೂರವಾಗಿದ್ರು. ಇದೀಗ ಡಿಸ್ಕೋಶಾಂತಿಯ ಪುತ್ರ ಮೇಘಾಂಶ್ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.

ಡಿಸ್ಕೋಶಾಂತಿ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿದಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ಪುತ್ರ ಮೇಘಾಂಶ್ ಟಾಲಿವುಡ್ನ ‘ರಾಜಧೂತ್’ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಕಾಲಿಡ್ತಿದ್ದಾರೆ. ಅಂದ್ದಾಗೆ ಇದೊಂದು ಮಾಸ್, ಸೆಂಟಿಮೆಂಟ್ ಚಿತ್ರವಾಗಿದ್ದು ಪಕ್ಕಾ ಲವರ್ ಬಾಯ್ ಗೆಟಪ್ನಲ್ಲಿ ಮಿಂಚಲಿದ್ದಾರೆ. ಲಕ್ಷ್ಯ ಬ್ಯಾನರ್ನಲ್ಲಿ ಸತ್ಯನಾರಾಯಣ ನಿರ್ಮಾಣದಲ್ಲಿ ರಾಜ್ಧೂತ್ ಸಿನಿಮಾ ಸೆಟ್ಟೇರೆಲಿದ್ದು ಕಾರ್ತಿಕ್ ಮತ್ತು ಅರ್ಜುನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬಾಲನಟನಾಗಿ ನೃತ್ಯ, ಡ್ಯಾನ್ಸ್ ಕಲೆಯನ್ನು ಕರಗತ ಮಾಡಿಕೊಂಡಿರೋ ಮೇಘಾಂಶ್ ರಾಜಧೂತ್ ಹೇಗೆಲ್ಲ ಕಾಣಿಸಲಿದ್ದಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ.

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...