ನಾನೆಷ್ಟು ಮೂರ್ಖಳು, ಬಿಜೆಪಿ ಖುಷಿ ಪಡಿಸಲು 25 – 30 ಕೇಸ್ ಹಾಕಿಸಿಕೊಂಡೆ’

Date:

ನಾನೆಷ್ಟು ಮೂರ್ಖಳು, ಬಿಜೆಪಿ ಖುಷಿ ಪಡಿಸಲು 25 – 30 ಕೇಸ್ ಹಾಕಿಸಿಕೊಂಡೆ’

ಬಾಲಿವುಡ್‌ನ ಜನಪ್ರಿಯ ನಟಿ ಕಂಗನಾ ರಣಾವತ್‌ ಅವರು ಈಗ ಊರ್ಮಿಳಾ ಮಾತೋಂಡ್ಕರ್‌ ವಿರುದ್ಧ ಕಿಡಿಕಾಡಿದ್ದಾರೆ. ವ್ಯಂಗ್ಯದ ಧಾಟಿಯಲ್ಲಿ ಟ್ವೀಟ್‌ ಮಾಡಿರುವ ಕಂಗನಾ, ರಾಜಕೀಯದ ವಿಚಾರಗಳನ್ನು ಎಳೆದುತಂದಿದ್ದಾರೆ. ಊರ್ಮಿಳಾ ಖರೀದಿಸಿರುವ 3 ಕೋಟಿ ರೂ. ಆಸ್ತಿಯೇ ಇಷ್ಟಕ್ಕೆಲ್ಲ ಕಾರಣ!
ಈ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅದು ಊರ್ಮಿಳಾ ಗಮನಕ್ಕೂ ಬಂದಿದೆ. ಅದಕ್ಕೆ ಅವರು ತಿರುಗೇಟು ನೀಡಿದ್ದಾರೆ. ‘ನಮಸ್ಕಾರ ಕಂಗನಾ ಅವರೇ. ನೀವು ನನ್ನ ಬಗ್ಗೆ ಹೇಳಿದ್ದನ್ನು ನಾನು ಮಾತ್ರವಲ್ಲದೆ ಇಡೀ ದೇಶವೇ ಕೇಳಿಸಿಕೊಂಡಿದೆ. ನಾನು ಇಡೀ ದೇಶದ ಮುಂದೆ ಈ ಮಾತು ಹೇಳುತ್ತಿದ್ದೇನೆ. ಜಾಗ ಮತ್ತು ಸಮಯವನ್ನು ನೀವು ನಿರ್ಧರಿಸಿ. ಅಲ್ಲಿಗೆ ನಾನೇ ದಾಖಲೆಗಳನ್ನು ಹಿಡಿದುಕೊಂಡು ಬರುತ್ತೇನೆ’ ಎಂದಿದ್ದಾರೆ.

‘ಹೆಚ್ಚೇನೂ ಅಲ್ಲ, ನನ್ನ 20-30 ವರ್ಷಗಳ ಕರಿಯರ್‌ನಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ 2011ರಲ್ಲಿ ಅಂಧೇರಿಯಲ್ಲಿ ಫ್ಲಾಟ್‌ ಖರೀದಿಸಿದೆ. ಅದಕ್ಕೆ ದಾಖಲೆ ಇದೆ. ಅದನ್ನೇ ನಾನು ಮಾರ್ಚ್‌ ತಿಂಗಳಲ್ಲಿ ಮಾರಿದ್ದೇನೆ. ಅದರಿಂದ ಬಂದ ಹಣದಿಂದಲೇ ನಾನು ಈಗ ಕಷ್ಟಪಟ್ಟು ಆಫೀಸ್‌ ಖರೀದಿಸಿದ್ದೇನೆ. ಅದಕ್ಕೂ ನನ್ನ ಬಳಿ ದಾಖಲೆ ಇದೆ. ಇದೆಲ್ಲವೂ ಆಗಿದ್ದು ನಾನು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ. ಅದನ್ನೆಲ್ಲ ನಾನು ನಿಮಗೆ ತೋರಿಸುತ್ತೇನೆ. ಅದಕ್ಕೆ ಪ್ರತಿಯಾಗಿ ನೀವು ಎನ್‌ಸಿಬಿಗೆ ನೀಡುತ್ತೇನೆ ಎಂದು ಹೇಳಿರುವ ಕೆಲವರ ಹೆಸರನ್ನು ನಮಗೆ ತಿಳಿಸಿ’ ಎಂದು ಊರ್ಮಿಳಾ ಸವಾಲು ಹಾಕಿದ್ದಾರೆ.

ಫ್ರೆಂಚ್ ಭೌತಜ್ಞಾನಿ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾಸ್ಟ್ರಾಡಾಮಸ್ ಬರೆದಿದ್ದ ಲೆಸ್ ಪ್ರೊಫೆಟಿಸ್‌ನಲ್ಲಿ ಜಗತ್ತಿನಲ್ಲಿ ಮುಂದೆ ಏನಾಗಲಿದೆ, ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಮೊದಲೇ ಅಂದಾಜಿಸಿದ್ದ. ಆತನ ಅಂದಾಜಿನಂತೆ ಮತ್ತು ಪುಸ್ತಕದಲ್ಲಿ ಹೇಳಿದ್ದಂತೆ ಈವರೆಗೆ ಹಲವು ಅಚ್ಚರಿಗಳು ಸಂಭವಿಸಿದ್ದು, ಜನರನ್ನು ಬೆರಗುಗೊಳಿಸಿವೆ. ನಾಸ್ಟ್ರಾಡಾಮಸ್ ಮರಣದ ಬಳಿಕ ಆತನ ಪುಸ್ತಕ ಪ್ರಸಿದ್ಧಿ ಪಡೆಯಿತು. ಹೀಗಿರುವಾಗ ನಾಸ್ಟ್ರಾಡಾಮಸ್ ಅಂದಾಜಿಸಿದಂತೆ 2020ರಲ್ಲಿ ಏನೇನು ನಡೆಯಲಿದೆ?. ನಿನ್ನೆಗಷ್ಟೆ ದೊಡ್ಡ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ನಮ್ಮಲ್ಲಿತ್ತು. ಆದರೆ, ನಾಸ್ಟ್ರಾಡಾಮಸ್ ಪ್ರಕಾರ 2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಕೂಡ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯ ಬಹುತೇಕ ನಿಜವಾಗಿವೆಯಂತೆ. ಲೆಸ್ ಪ್ರೊಫೇಟಿಸ್ ಎಂಬ ಪುಸ್ತಕವನ್ನು ಬರೆದಿರುವ ನಾಸ್ಟ್ರಾಡಾಮಸ್, ಅದರಲ್ಲಿ ಈ ಅಂದಾಜುಗಳನ್ನು ಮಾಡಿದ್ದಾನಂತೆ. ಐದು ಶತಮಾನಗಳ ಹಿಂದೆ ಈ ಪುಸ್ತಕ ಬರೆಯಲಾಗಿದೆಯಾದರೂ ಸಹ ಇಂದಿಗೂ ಇದು ಪ್ರಸ್ತುತವಾಗಿದೆ.
ಈತನ ಅನೇಕ ಭವಿಷ್ಯ ನಿಜವಾಗಿರುವ ಕಾರಣ ಇದೀಗ ಆತನ ಪುಸ್ತಕಗಳನ್ನು ಓದುವ ಮಂದಿ 2021 ರ ಬಗ್ಗೆಯೂ ಈತ ಹೇಳಿರುವುದು ನಿಜವಾಗುವುದೆಂಬ ಭಯದಲ್ಲಿ ಇದ್ದಾರೆ. ಈ ವರ್ಷ ಕೆಲ ಯುವಕರು ಅರ್ಧ ಸತ್ತಿದ್ದು, ಅವುಗಳ ಪ್ರೇತಾತ್ಮಗಳೆಲ್ಲಾ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ ಎಂದಿದ್ದಾರೆ.
ಇದೇ ವೇಳೆ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆಲ್ಲಾ ನಾಶ ಮಾಡಬಲ್ಲದು. ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಈ ಪುಸ್ತಕದಲ್ಲಿ ಬರೆದಿದ್ದಾರೆ.
ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿರುವ ಮಾತುಗಳನ್ನು ಅಮೆರಿಕದ ನಾಸಾದ ಮುನ್ಸೂಚನೆ ಸಹ ಸ್ಪಷ್ಟಪಡಿಸುತ್ತಿದೆ. ಇವೆಲ್ಲಾ ಸಾಕಾಗದೇ ಇದ್ದಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಬಗೆಗೂ ಪುಸ್ತಕದಲ್ಲಿ ಉಲ್ಲೇಖವಿದೆ.
ಇದೇ ವೇಳೆ ಸಾಂಕ್ರಮಿಕಗಳು, ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪದಿಂದ ಜನರ ತತ್ತರಿಸುವುದರೊಂದಿಗೆ ಈ ವರ್ಷಗಳಲ್ಲಿ ಕೊರೋನಾಗಿಂತಲೂ ಇನ್ನೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುತ್ತದೆ ಈ ಬುಕ್.
ಸುಮಾರು 465 ವರ್ಷಗಳ ಹಿಂದೆ ಮೈಕಲ್ ದಿ ನಾಸ್ಟ್ರಾಡಾಮಸ್  ಪ್ರಪಂಚದ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ (Prophecies of Nostradamus) ಎಂಬ ತನ್ನ ಪುಸ್ತಕದಲ್ಲಿ, ನಾಸ್ಟ್ರಾಡಾಮಸ್ ಒಟ್ಟು 6338 ಭವಿಷ್ಯವಾಣಿಗಳನ್ನುಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ. 70 ರಷ್ಟು  ನಿಜವೆಂದು ಸಾಬೀತಾಗಿವೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...