ಜಯಶ್ರೀ ಆತ್ಮಹತ್ಯೆ ಗೆ ಕಾರಣ ಏನು? ದಯಾಮರಣ ಬೇಕು ಅಂದಿದ್ರು ಜಯಶ್ರೀ.

0
71

ಕನ್ನಡ ಬಿಗ್ ಬಾಸ್ 3 ಕ್ಯಾತಿಯ ಜಯಶ್ರೀ ಇಂದು ಆತ್ಮಹತ್ಯೆ ಗೆ ಶರಣಾಗಿದ್ದಾರೆ ಈ ಹಿಂದೆ ಕೂಡ ಜಯಶ್ರೀ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡಿದ್ದರು. ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವ ಸಂಧ್ಯಾಕಿರಣ ವೃದ್ದಾಶ್ರಮದಲ್ಲಿ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಹಿಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ತಮ್ಮ ಫೇಸ್ಬುಕ್ ಖಾತೆ ಯಲ್ಲಿ ಲೈವ್ ಬಂದು ಮಾನಸಿಕವಾಗಿ ನಾನು ನೋಡಿದೀನಿ ನನಗೆ ನಂದೇ ಸಮಸ್ಸೆ ಇದೆ ನಾನು ತುಂಬಾ ನೊಂದೀದಿನಿ ನನ್ನ ಜೀವನದಲ್ಲಿ ಅದ ಘಟನೆ ಮರಿಯೋಕೆ ಆಗ್ತಿಲ್ಲ ನಾನು ಒಳ್ಳೆ ಹುಡುಗಿ ಅಲ್ಲ ನಾನು ಬದುಕಿರಲ್ಲ ಎಂಬ ಮಾತನ್ನ ಲೈವ್ ನಲ್ಲಿ ಆಡಿದ್ರು ನಂತರ ಅವರ ಸ್ನೇಹಿತರುಗಳು ಮಾತನಾಡಿದ್ದು ಕಿಚ್ಚ ಸುದೀಪ್ ಅವರು ಕೂಡ ಕರೆ ಮಾಡಿ ಮಾತನಾಡಿ ಬುದ್ದಿ ಹೇಳಿದ್ದು ಅನಂತರ ಜಯಶ್ರೀ ಕೂಡ ಈ ರೀತಿ ಮಾಡಿಕೊಳಲ್ಲ ಎಂದು ಹೇಳಿದ್ರು.

ಆದ್ರೆ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಮಾತ್ರವಲ್ಲದೇ 5 ವರ್ಷ ವಯಸ್ಸಿನಲ್ಲೇ ನನ್ನ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ನನ್ನ ಮೇಲೆ ಹುಡುಗಿಯರೂ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ, ನನಗೆ ದಯಾಮರಣ ಬೇಕು ಎಂದೆಲ್ಲ ಕೇಳಿಕೊಂಡಿದ್ದರು.

LEAVE A REPLY

Please enter your comment!
Please enter your name here